ಪ್ರತಿಭಟನೆಯಲ್ಲಿ ಭಾಗವಹಿಸದ ಸುಧಾಕರ್ ಅವರಿಗೆ ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ, 'ಇಂದು ನಡೆದ ಪ್ರತಿಭಟನಾ ಮೆರವಣಿಗೆಯ ಸಮಯದಲ್ಲಿ 83 ವರ್ಷ ಪ್ರಾಯದ ನನ್ನ ತಂದೆ ಕೇಶವರೆಡ್ಡಿ ಅವರು ಮಾಹಿತಿ ಕೊರತೆಯಿಂದಾಗಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ನೀಡಿರುವ ಕೆಲ ವೈಯಕ್ತಿಕ ಹೇಳಿಕೆಗಳು ಸಮಂಜಸವಲ್ಲ. ಈ ಹೋರಾಟ ವೈಯಕ್ತಿಕ ಹೋರಾಟವಲ್ಲ ಹಾಗೂ ಈ ಹೇಳಿಕೆಗಳಿಂದ ಶಿವಕುಮಾರ್ ಅವರ ಮನಸ್ಸಿಗೆ ಬೇಸರ ಉಂಟಾಗಿದ್ದರೆ ನಾನೂ ಅವರಲ್ಲಿ ಕ್ಷಮೆಯಾಚಿಸುತ್ತೇನೆ' ಎಂದು ಟ್ವೀಟ್ಮಾಡಿದ್ದಾರೆ.