ನಗರಸಭೆ ಆಯುಕ್ತ ವಿ.ಸತ್ಯನಾರಾಯಣ ಮಾತನಾಡಿ, ‘ಪಿನಾಕಿನಿಯ ಒಡಲಲ್ಲಿ ತ್ಯಾಜ್ಯ ತುಂಬಿರುವ ಬಗ್ಗೆ ಅನೇಕ ಬಾರಿ ನಾಗರಿಕರು ತಿಳಿಸಿದ್ದರು. ಈ ವಿಚಾರವಾಗಿ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಬಳಿಕ ಮೊದಲ ಹಂತವಾಗಿ ಸೇತುವೆಯ ಕೆಳಭಾಗದಲ್ಲಿ ಹಾಗೂ ಎರಡನೇ ಹಂತವಾಗಿ ಸೇತುವೆಯ ಮೇಲ್ಭಾಗದಲ್ಲಿ ನದಿಯಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಲು ಮುಂದಾಗಿದ್ದೇವೆ. ನದಿಯಲ್ಲಿ ಇನ್ನು ನೀರು ಹರಿಯುತ್ತಿದ್ದು ಜತೆಗೆ ನಿಂತ ನೀರಿನಲ್ಲಿ ಸೀಮೆಜಾಲಿ ಮುಳ್ಳುಗಳು ಇರುವ ಕಾರಣ ತ್ಯಾಜ್ಯ ತೆರವಿಗೆ ಅಡಚಣೆಯಾಗುತ್ತಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಸಂಪೂರ್ಣವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಲಾಗುವುದು’ ಎಂದರು.