ಶಿಡ್ಲಘಟ್ಟ: ಅಂಗನವಾಡಿ, ಗ್ರಾಮ ಪಂಚಾಯಿತಿ, ಬಿಸಿಯೂಟ ಹಾಗೂ ಹಾಸ್ಟೆಲ್ ನೌಕರರ ಸಂಘಟನೆಗಳ ಸದಸ್ಯರು ಸಿಐಟಿಯು ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಸಿಬ್ಬಂದಿಗೆ 15 ತಿಂಗಳಿಂದ ವೇತನ ನೀಡಿಲ್ಲ. ಜೇಷ್ಟತಾ ಪಟ್ಟಿ ಬಿಡುಗಡೆ ಮಾಡಬೇಕು. ಅಕ್ಷರ ದಾಸೋಹ ನೌಕರರಿಗೆ ಏಪ್ರಿಲ್ ತಿಂಗಳಿನಿಂದ ವೇತನ ನೀಡಬೇಕು. ಅಂಗನವಾಡಿ ಹಾಗೂ ಹಾಸ್ಟೆಲ್ ನೌಕರರನ್ನು 3 ಮತ್ತು 4ನೇ ದರ್ಜೆ ನೌಕರರನ್ನಾಗಿ ಪರಿಗಣಿಸಿ, ₹18 ಸಾವಿರ ವೇತನ ನೀಡಬೇಕು. ಎಲ್ಐಸಿ ಆಧಾರಿತ ಪಿಂಚಣಿ ನೀಡಬೇಕು ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಲಾಯಿತು.
ಸಿಐಟಿಯು ತಾಲ್ಲೂಕು ಅಧ್ಯಕ್ಷ ಸುದರ್ಶನ್, ಬಿಸಿಯೂಟ ನೌಕರರ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಅಂಗನವಾಡಿ ನೌಕರರ ಸಂಘದ ಬೈರಗಾನಹಳ್ಳಿ ಮಂಜುಳಾ, ಸುನಂದಮ್ಮ, ಹಾಸ್ಟೆಲ್ ನೌಕರರ ಸಂಘದ ಆಂಜನೇಯರೆಡ್ಡಿ, ಭಾಗ್ಯಮ್ಮ, ವಿಜಯಮ್ಮ, ಗಾಯಿತ್ರಿ, ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಸುದರ್ಶನ್ ಹಾಜರಿದ್ದರು.