ಬೆಟ್ಟವು ಹಸಿರುಮಯವಾಗಿದ್ದು ನಗರಕ್ಕೆ ಹೊಂದಿಕೊಂಡಿರುವುದರಿಂದ ಯುವಕ-ಯುವತಿಯರು, ಹಿರಿಯ ಜೀವಿಗಳು ವಾಯು ವಿಹಾರಕ್ಕಾಗಿ ಹಾಗೂ ಪ್ರಕೃತಿಯ ಸೌಂದರ್ಯ ಸವಿಯಲು ಪ್ರತಿನಿತ್ಯ ಬೆಟ್ಟಕ್ಕೆ ಹೋಗುತ್ತಾರೆ. ಇದೀಗ ಬೆಂಕಿಯ ಕೆನ್ನಾಲಿಗೆಯಿಂದ ಹಸಿರು ಸುಟ್ಟು ಕರಕಲಾಗಿದೆ. ಅನೇಕ ಗಿಡ ಮರಗಳು, ಸಣ್ಣ ಪುಟ್ಟ ಪ್ರಾಣಿಗಳು ಬೆಂಕಿಗೆ ಆಹುತಿಯಾಗಿವೆ.