ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಿ ಸಮರ್ಪಣಾ ಅಭಿಯಾನ

Last Updated 18 ಜನವರಿ 2021, 2:03 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರದಲ್ಲಿ ಭಾನುವಾರ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ನಗರಸಭೆ ಸದಸ್ಯ ಮೋಹನ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಇಡೀ ರಾಷ್ಟ್ರದ ಜನತೆ ದಶಕಗಳಿಂದ ಕಾಯುತ್ತಿರುವ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸುಯೋಗ ‌ಕೂಡಿಬಂದಿದೆ. ದೇಶದಲ್ಲಿನ ಎಲ್ಲ ಹಿಂದೂ ಧರ್ಮದವರು ಒಮ್ಮತದಿಂದ ಈ ಧಾರ್ಮಿಕ ಕಾರ್ಯಕ್ಕೆ ಸಹಕಾರಿಯಾಗಬೇಕಾಗಿದೆ ಎಂದರು.

ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ‌ಪ್ರತಿ ಮನೆಯಿಂದ ದೇಣಿಗೆ ಸಂಗ್ರಹಣೆ ಮಾಡಿ ನಿಧಿ ಸಮರ್ಪಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಇದರಿಂದ ರಾಷ್ಟ್ರದ ನಿಜವಾದ ಕರ್ತವ್ಯವನ್ನು ಪೂರೈಸಿದಂತಾಗುತ್ತದೆ. ಈ ಸತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಮುಖಂಡರಾದ ಮಂಜುನಾಥ, ಅಂಜನಾಚಾರಿ, ಮಂಜುನಾಥ್ ರಾವ್, ಮಣಿಕಂಠ, ಮಧು, ಸತೀಶ್, ಲಕ್ಷ್ಮಣರಾವ್, ಯೋಗೇಶ್, ಸುರೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT