ಗೌರಿಬಿದನೂರು: ದಾರಿ ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಮಹಿಳೆಯ ಮಾಂಗಲ್ಯ ಸರವನ್ನು ಕಸಿದುಕೊಂಡು ಹೋಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವನಿತಾ(27) ಸರ ಕಳೆದು ಕೊಂಡವರು. ಇಡಗೂರು-ಭೀಮನಹಳ್ಳಿ ರಸ್ತೆಯ ಜಮೀನಿನ ಬಳಿ ಮೇಕೆ ಸಾಕಾಣಿಕೆ ಮಾಡುತ್ತಿದ್ದ ಮಾವ ನಾಗಪ್ಪನಿಗೆ ಊಟ ಕೊಟ್ಟು ಹಿಂತಿರುಗುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಅಪರಿಚಿತರು ಇಡಗೂರಿಗೆ ಹೋಗುವ ದಾರಿ ಯಾವುದು ಎಂದು ಅವರನ್ನು ಕೇಳಿದ್ದಾರೆ.
ಸ್ವಲ್ಪ ದೂರ ಹೋಗಿ ಮತ್ತೆ ಹಿಂತಿರುಗಿ ಬಂದು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸಿಪಿಐ ಎಸ್. ರವಿ, ಪಿಎಸ್ಐ ಮೋಹನ್ ಭೇಟಿ ನೀಡಿ ಪರಿಶೀಲಿಸಿದರು.