<p>ಗೌರಿಬಿದನೂರು: ಇಲ್ಲಿಯ ವಿನಾಯಕನಗರ ನಿವಾಸಿ ಶಿವಶಂಕರ್ ಆರಾಧ್ಯ ಎಂಬುವರಿಗೆ ಕಾರು ಕೊಡಿಸುವುದಾಗಿ ಕರೆದೊಯ್ದು ₹7.50 ಲಕ್ಷ ದೋಚಿ ಪರಾರಿಯಾಗಿದ್ದ ಬೆಂಗಳೂರಿನ ಇಬ್ಬರು ಸೇರಿದಂತೆ ನಾಲ್ವರು ಆರೋಪಿಗಳನ್ನು ಗೌರಿಬಿದನೂರು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.</p>.<p>ಗೌರಿಬಿದನೂರು ವಿನಾಯಕ ನಗರದ ನಿವಾಸಿ ಯಶವಂತ್ (25), ಬೆಂಗಳೂರಿನ ರಾಜಾಜಿನಗರದ ಭರತ್ (23) ಮತ್ತು ದರ್ಶನ್ (23) ಹಾಗೂ ಬಿಡದಿಯ ವಿಷಕಂಠ (40) ಬಂಧಿತ ಆರೋಪಿಗಳು.</p>.<p>ಟ್ರಾವೆಲ್ಸ್ನಲ್ಲಿ ಉತ್ತಮ ಆದಾಯ ಇದೆ. ಇದಕ್ಕಾಗಿ ಕಾರು ಸ್ವಂತವಾಗಿ ಖರೀದಿಸುವಂತೆ ಯಶವಂತ್ ಹೇಳಿದ್ದ. ಅದಕ್ಕಾಗಿ ₹14 ಲಕ್ಷ ಹೊಂದಿಸಿಕೊಂಡು ಒಂದು ಬ್ಯಾಗ್ನಲ್ಲಿ ₹6.50 ಲಕ್ಷ, ಮತ್ತೊಂದು ಬ್ಯಾಗ್ನಲ್ಲಿ ₹7.50 ಲಕ್ಷ ತೆಗೆದುಕೊಂಡು ಹೋಗಿದ್ದೆ. ನಾನು, ಯಶವಂತ್ ಕಾರಿನ ಬಳಿ ತೆರಳುತ್ತಿದ್ದಂತೆಯೇ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಣ್ಣಿಗೆ ಖಾರದಪುಡಿ ಎರಚಿ ₹7.50 ಲಕ್ಷವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಶಿವಶಂಕರ್ ದೂರು ನೀಡಿದ್ದರು.</p>.<p>ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಯಶವಂತ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಹಣ ದೋಚಲು ಸಂಚು ರೂಪಿಸಿದ ಭರತ್ ಸೇರಿದಂತೆ ಇತರ ಮಾಹಿತಿ ನೀಡಿದ್ದ. ಬೆಂಗಳೂರಿನಲ್ಲಿ ಅವಿತುಕೊಂಡಿದ್ದ ಭರತ್, ದರ್ಶನ್ ಮತ್ತು ವಿಷಕಂಠನನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿ ಕರೆ ತಂದಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-18-191026877</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗೌರಿಬಿದನೂರು: ಇಲ್ಲಿಯ ವಿನಾಯಕನಗರ ನಿವಾಸಿ ಶಿವಶಂಕರ್ ಆರಾಧ್ಯ ಎಂಬುವರಿಗೆ ಕಾರು ಕೊಡಿಸುವುದಾಗಿ ಕರೆದೊಯ್ದು ₹7.50 ಲಕ್ಷ ದೋಚಿ ಪರಾರಿಯಾಗಿದ್ದ ಬೆಂಗಳೂರಿನ ಇಬ್ಬರು ಸೇರಿದಂತೆ ನಾಲ್ವರು ಆರೋಪಿಗಳನ್ನು ಗೌರಿಬಿದನೂರು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.</p>.<p>ಗೌರಿಬಿದನೂರು ವಿನಾಯಕ ನಗರದ ನಿವಾಸಿ ಯಶವಂತ್ (25), ಬೆಂಗಳೂರಿನ ರಾಜಾಜಿನಗರದ ಭರತ್ (23) ಮತ್ತು ದರ್ಶನ್ (23) ಹಾಗೂ ಬಿಡದಿಯ ವಿಷಕಂಠ (40) ಬಂಧಿತ ಆರೋಪಿಗಳು.</p>.<p>ಟ್ರಾವೆಲ್ಸ್ನಲ್ಲಿ ಉತ್ತಮ ಆದಾಯ ಇದೆ. ಇದಕ್ಕಾಗಿ ಕಾರು ಸ್ವಂತವಾಗಿ ಖರೀದಿಸುವಂತೆ ಯಶವಂತ್ ಹೇಳಿದ್ದ. ಅದಕ್ಕಾಗಿ ₹14 ಲಕ್ಷ ಹೊಂದಿಸಿಕೊಂಡು ಒಂದು ಬ್ಯಾಗ್ನಲ್ಲಿ ₹6.50 ಲಕ್ಷ, ಮತ್ತೊಂದು ಬ್ಯಾಗ್ನಲ್ಲಿ ₹7.50 ಲಕ್ಷ ತೆಗೆದುಕೊಂಡು ಹೋಗಿದ್ದೆ. ನಾನು, ಯಶವಂತ್ ಕಾರಿನ ಬಳಿ ತೆರಳುತ್ತಿದ್ದಂತೆಯೇ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಣ್ಣಿಗೆ ಖಾರದಪುಡಿ ಎರಚಿ ₹7.50 ಲಕ್ಷವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಶಿವಶಂಕರ್ ದೂರು ನೀಡಿದ್ದರು.</p>.<p>ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಯಶವಂತ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಹಣ ದೋಚಲು ಸಂಚು ರೂಪಿಸಿದ ಭರತ್ ಸೇರಿದಂತೆ ಇತರ ಮಾಹಿತಿ ನೀಡಿದ್ದ. ಬೆಂಗಳೂರಿನಲ್ಲಿ ಅವಿತುಕೊಂಡಿದ್ದ ಭರತ್, ದರ್ಶನ್ ಮತ್ತು ವಿಷಕಂಠನನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿ ಕರೆ ತಂದಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-18-191026877</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>