<p><strong>ಗುಡಿಬಂಡೆ:</strong> ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಗುಡಿಬಂಡೆ ತಾಲ್ಲೂಕಿನ 2ನೇ ಸಮ್ಮೇಳನ ಸೋಮೇನಹಳ್ಳಿಯಲ್ಲಿ ಶುಕ್ರವಾರ ನಡೆಯಿತು.</p>.<p>ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ‘ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ಜೀವನ ತುಂಬಾ ಕಷ್ಟಕರವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ’ ಎಂದರು.</p>.<p>ಮನರೇಗಾ ಯೋಜನೆಯು ಗ್ರಾಮೀಣ ಬಡವರಿಗೆ ಆಸರೆಯಾಗಿತ್ತು. ಇದು ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಉದ್ಯೋಗ ಕಲ್ಪಿಸುವ ಯೋಜನೆಯಾಗಿತ್ತು. ಆದರೆ, ಜಿ–ರಾಮ್ ಜಿ ಯೋಜನೆಯಿಂದ ಗ್ರಾಮೀಣ ಜನರ ಬದುಕಿನ ಮೇಲೆ ಪರಿಣಾಮ ಬೀರಲಿದೆ ಎಂದರು. </p>.<p>ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಯರಾಮ ರೆಡ್ಡಿ, ಚನ್ನರಾಯಪ್ಪ, ಮಸಣ ಕಾರ್ಮಿಕರ ಸಂಘದ ಕೆ. ಮುನಿಯಪ್ಪ, ಸೋಮೇನಹಳ್ಳಿ ಲಕ್ಷ್ಮಿನಾರಾಯಣ, ಆಂಧ್ರ ಸೀನಪ್ಪ, ಮಂಜುನಾಥ ಉಪಸ್ಥಿತರಿದ್ದರು.</p>.<p><strong>ನೂತನ ಸಮಿತಿ ಆಯ್ಕೆ:</strong> ನೂತನ ಸಮಿತಿಗೆ 17 ಜನರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಆಗಿ ಕೊಂಡವಲಪಲ್ಲಿ ಕೃಷ್ಣಪ್ಪ, ಕಾರ್ಯದರ್ಶಿಯಾಗಿ ಸೋಮನಹಳ್ಳಿ ಗಂಗರಾಜು ಆಯ್ಕೆಯಾದರು. </p>.<p>ಉಪಾಧ್ಯಕ್ಷರರಾಗಿ ಸೋಮೇನಹಳ್ಳಿ ರಾಮಕೃಷ್ಣ, ಬೆಣ್ಣೀಪರ್ತಿ ಶ್ರೀರಾಮಪ್ಪ, ವೆಂಕಟೇಶ ಸೋಮೇನಹಳ್ಳಿ, ಸಹ ಕಾರ್ಯದರ್ಶಿಗಳಾಗಿ ನರಸಪ್ಪ ಚಂಡೂರು, ಶ್ರೀನಿವಾಸ ತಿರುಮಣಿ, ಚೌಡಪ್ಪ ಸೋಮೇನಹಳ್ಳಿ, ಆದಿ ನಾರಾಯಣಪ್ಪ ನಲ್ಲಗೊಂಡಯ್ಯಗಾರಿ ಪಲ್ಲಿ ಆದಿನಾರಾಯಣಪ್ಪ ಪಸುಪುಲೋಡು ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಿಬಂಡೆ:</strong> ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಗುಡಿಬಂಡೆ ತಾಲ್ಲೂಕಿನ 2ನೇ ಸಮ್ಮೇಳನ ಸೋಮೇನಹಳ್ಳಿಯಲ್ಲಿ ಶುಕ್ರವಾರ ನಡೆಯಿತು.</p>.<p>ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ ಮಾತನಾಡಿ, ‘ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ಜೀವನ ತುಂಬಾ ಕಷ್ಟಕರವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ’ ಎಂದರು.</p>.<p>ಮನರೇಗಾ ಯೋಜನೆಯು ಗ್ರಾಮೀಣ ಬಡವರಿಗೆ ಆಸರೆಯಾಗಿತ್ತು. ಇದು ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಉದ್ಯೋಗ ಕಲ್ಪಿಸುವ ಯೋಜನೆಯಾಗಿತ್ತು. ಆದರೆ, ಜಿ–ರಾಮ್ ಜಿ ಯೋಜನೆಯಿಂದ ಗ್ರಾಮೀಣ ಜನರ ಬದುಕಿನ ಮೇಲೆ ಪರಿಣಾಮ ಬೀರಲಿದೆ ಎಂದರು. </p>.<p>ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಯರಾಮ ರೆಡ್ಡಿ, ಚನ್ನರಾಯಪ್ಪ, ಮಸಣ ಕಾರ್ಮಿಕರ ಸಂಘದ ಕೆ. ಮುನಿಯಪ್ಪ, ಸೋಮೇನಹಳ್ಳಿ ಲಕ್ಷ್ಮಿನಾರಾಯಣ, ಆಂಧ್ರ ಸೀನಪ್ಪ, ಮಂಜುನಾಥ ಉಪಸ್ಥಿತರಿದ್ದರು.</p>.<p><strong>ನೂತನ ಸಮಿತಿ ಆಯ್ಕೆ:</strong> ನೂತನ ಸಮಿತಿಗೆ 17 ಜನರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಆಗಿ ಕೊಂಡವಲಪಲ್ಲಿ ಕೃಷ್ಣಪ್ಪ, ಕಾರ್ಯದರ್ಶಿಯಾಗಿ ಸೋಮನಹಳ್ಳಿ ಗಂಗರಾಜು ಆಯ್ಕೆಯಾದರು. </p>.<p>ಉಪಾಧ್ಯಕ್ಷರರಾಗಿ ಸೋಮೇನಹಳ್ಳಿ ರಾಮಕೃಷ್ಣ, ಬೆಣ್ಣೀಪರ್ತಿ ಶ್ರೀರಾಮಪ್ಪ, ವೆಂಕಟೇಶ ಸೋಮೇನಹಳ್ಳಿ, ಸಹ ಕಾರ್ಯದರ್ಶಿಗಳಾಗಿ ನರಸಪ್ಪ ಚಂಡೂರು, ಶ್ರೀನಿವಾಸ ತಿರುಮಣಿ, ಚೌಡಪ್ಪ ಸೋಮೇನಹಳ್ಳಿ, ಆದಿ ನಾರಾಯಣಪ್ಪ ನಲ್ಲಗೊಂಡಯ್ಯಗಾರಿ ಪಲ್ಲಿ ಆದಿನಾರಾಯಣಪ್ಪ ಪಸುಪುಲೋಡು ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>