ಚಿಕ್ಕಬಳ್ಳಾಪುರ: ನಗರದಲ್ಲಿ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿರುವ ಜನಧ್ವನಿ ಯಾತ್ರೆಗೆ ಕಾರ್ಯಕರ್ತರ ದಂಡೇ ಸೇರಿದೆ.
ಬಿಬಿ ರಸ್ತೆಯಲ್ಲಿ ಎತ್ತಿನ ಬಂಡಿ, ಟ್ರಾಕ್ಟರ್ ಗಳು ಸಾಲುಗಟ್ಟಿವೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಂದಾವರ ಕೆರೆಗೆ ಬಾಗಿಲ ಅರ್ಪಿಸುವರು. ನಂತರ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಯಾತ್ರೆ ಆರಂಭವಾಗಲಿದೆ. ಶಿಡ್ಲಘಟ್ಟ ವೃತ್ತದಲ್ಲಿ ಕಾರ್ಯಕರ್ತರು, ಮುಖಂಡರು ಸಮಾವೇಶಗೊಳ್ಳುವರು.