ಮಂಜುನಾಥ್ ಅವರ ರಾಜೀನಾಮೆ ಕಾನೂನು ಬದ್ಧವಾಗಿ ಅಂಗೀಕಾರಗೊಳ್ಳಲು ಜುಲೈ 11 ಕೊನೆಯ ದಿನವಾಗಿತ್ತು. ಆ ನಡುವೆ ಅಧ್ಯಕ್ಷರ ಹುದ್ದೆಗಾಗಿ ಕೆಲ ಸದಸ್ಯರ ನಡುವೆ ಪೈಪೋಟಿ ಸಹ ನಡೆದಿತ್ತು. ಆದರೆ, ಕ್ಷೀಪ್ರ ರಾಜಕೀಯ ಬೆಳವಣಿಗೆ ನಡುವೆ ಸುಧಾಕರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆ ಜುಲೈ 9 ರಂದು ಪಕ್ಷದ ವರಿಷ್ಠರ ಸೂಚನೆ ಮೆರೆಗೆ ಅಧ್ಯಕ್ಷ, ಉಪಾಧ್ಯಕ್ಷೆ ಇಬ್ಬರೂ ರಾಜೀನಾಮೆ ಹಿಂಪಡೆದಿದ್ದರು.