ಗ್ರಾಮದ ನಾರಾಯಣಸ್ವಾಮಿ ಮತ್ತು ಪ್ರಭಾವತಿ ದಂಪತಿಯ 6 ವರ್ಷದ ಮಗು ವಿಷ್ಣುವರ್ಧನ್ ಹತ್ಯೆಯಾದ ಬಾಲಕ. ಆಂಧ್ರ ಗಡಿಭಾಗದ ಸಾದಾರ್ಲಹಳ್ಳಿ ಬಳಿ ಮಗುವಿನ ತಲೆಬುರುಡೆ, ಮೂಳೆಗಳು ಹಾಗೂ ಅರೆಬರೆ ಬಟ್ಟೆಗಳು ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಮಾರ್ಚ್ 16ರಂದು ನಿಗೂಢವಾಗಿ ನಾಪತ್ತೆಯಾಗಿದ್ದ ಮಗು ವಿಷ್ಣುವರ್ಧನ್ನ ದೇಹ 13 ದಿನಗಳ ನಂತರ ಅವಶೇಷಗಳೊಂದಿಗೆ ಪತ್ತೆಯಾಗಿದೆ. ವಾಟದಹೊಸಹಳ್ಳಿ ಗ್ರಾಮದ ರಾಮಾಂಜಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.