ಇಂತಹ ಸಂತರ ದರ್ಗಾವನ್ನು ವಕ್ಫ್ ಮಂಡಳಿ ಅಧಿಕಾರಿಗಳು ದಶಕ ಕಳೆದರೂ ಅಭಿವೃದ್ಧಿಪಡಿಸಿಲ್ಲ. ಸರ್ಕಾರದಿಂದ ಮಸೀದಿ, ದರ್ಗಾ ಅಭಿವೃದ್ಧಿಗೆ ಕೋಟ್ಯಂತರ ಹಣ ಬಂದರೂ ನಿರೀಕ್ಷಿದಷ್ಟು ಪ್ರಗತಿ ಹೊಂದಿಲ್ಲ. ಚಿಂತಾಮಣಿಯ ಮುರಗಮಲ್ಲಾ ದರ್ಗಾಗೆ ಕೋಟ್ಯಂತರ ಹಣ ವ್ಯಯ ಮಾಡಿರುವ ವಕ್ಫ್ ಮಂಡಳಿಯು ಬಾಗೇಪಲ್ಲಿ ದರ್ಗಾವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.