‘ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಸ್ತ್ರೀಶಕ್ತಿ ಸಂಘಗಳು ಮತ್ತು ಇತರೆ ಸಂಘಗಳ ಸದಸ್ಯರಿಗೆ ಸಾಲ ವಿತರಣೆ ಮಾಡುವುದು ಸಮಂಜಸವಲ್ಲ ಎಂಬ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆದೇಶ ಹೊರಡಿಸಿದ್ದಾರೆ.ಚಿಕ್ಕಬಳ್ಳಾಪುರ, ಬಾಗೇಪಲ್ಲಿಯಲ್ಲಿ ಕಳೆದ ವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸಾರ್ವಜನಿಕ ಸಮಾರಂಭಗಳಲ್ಲಿ ಸಾಲದ ಚೆಕ್ ವಿತರಿಸಿದ್ದಾರೆ. ನಾವು ಸಾಲ ವಿತರಿಸುವ ಸಮಾರಂಭಗಳಿಗೆ ಮಾತ್ರ ಆದೇಶ ಅನ್ವಯವಾಗುತ್ತದೆಯೇ? ಬಿಜೆಪಿಗೆ ಒಂದು ನ್ಯಾಯ, ಇತರರಿಗೆ ಒಂದು ನ್ಯಾಯವೇ? ಸಾಲ ನೀಡುವುದು ಸಾರ್ವಜನಿಕರ ತೆರಿಗೆಯ ಹಣದಿಂದ, ಚುನಾಯಿತ ಜನಪ್ರತಿನಿಧಿಯಾಗಿ ಸಾಲ ವಿತರಿಸುವ ಹಕ್ಕು ಶಾಸಕರಿಗೆ ಇದೆ’ ಎಂದರು.