ಮೊದಲೆರಡು ದಿನ ನಾಗರಾಜ್ ಅವರ ಮನೆ ಮುಂದೆ ಜಮಾಯಿಸಿದ ಕಾಂಗ್ರೆಸ್ನ ಕೆಲ ಮುಖಂಡರು ಈ ದಾಳಿಯ ಹಿಂದೆ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮತ್ತು ಬಿಜೆಪಿ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿ, ನಾಗರಾಜ್ ಅವರಿಗೆ ನೈತಿಕ ಬೆಂಬಲ ಸೂಚಿಸಿದ್ದರು. ಆದರೆ ಮೂರು ದಿನವೂ ನಾಗರಾಜ್ ಅವರ ಆಪ್ತರು, ಸಿಬ್ಬಂದಿಗಳು ಮನೆ ಎದುರು ಕುತೂಹಲ, ಆತಂಕದಿಂದ ಅಧಿಕಾರಿಗಳು ನಿರ್ಗಮಿಸುವುದನ್ನೇ ಎದುರು ನೋಡುತ್ತಿದ್ದರು.