ಬೆಳಿಗ್ಗೆ 5.30ಕ್ಕೆ ಸುಪ್ರಭಾತ, 6.30ಕ್ಕೆ ಪಂಚಾಮೃತ ಅಭಿಷೇಕ, 8.30ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ 12ಕ್ಕೆ ಮಹಾಪ್ರಸಾದ ನಡೆಯಿತು. ಸಂಜೆ 5ಕ್ಕೆ ಲೋಕ ಕಲ್ಯಾಣಾರ್ಥ ಸ್ವಾಮಿ ಅವರ ತಿರುಕಲ್ಯಾಣೋತ್ಸವ ನಡೆಯಿತು.ನಗರದ ವಿವಿಧ ಭಾಗಗಳ ಭಕ್ತರು ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡಿದ್ದರು. ಜನರು ಕೋವಿಡ್ ಮಾರ್ಗಸೂಚಿ ಅನ್ವಯ ಭಾಗವಹಿಸಿದ್ದರು.