ಗೌರಿಬಿದನೂರು: ‘ನಾನು ಎಂಜಿನಿಯರಿಂಗ್ ಪದವಿ ಪಡೆದು ರಾಜಕಾರಣಕ್ಕೆ ಬಂದವನಲ್ಲ. ಕಾನೂನು ಓದಿ ರಾಜಕಾರಣಕ್ಕೆ ಬಂದವನು. ಬಿಜೆಪಿಯವರಿಂದ ಕಾನೂನು ಕಲಿಯುವ ಅಗತ್ಯವಿಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.