ಕವಿಗೋಷ್ಠಿಯಲ್ಲಿ ಪುರುಷೋತ್ತಮ್, ರಾಜೇಶ್ವರಿ ನಾರಾಯಣ್, ಶಿ.ಮ. ಮಂಜುನಾಥ್, ಎಂ. ಸುರೇಶ್, ಎನ್. ಮುನಿಕೃಷ್ಣಪ್ಪ, ಎಚ್.ಎಸ್. ಅಶೋಕ್, ಸ್ಮಿತವಾಣಿ ಸೀತಮ್ಮ, ಕೆ.ಎನ್. ಅಕ್ರಂಪಾಷಾ, ಸಿ.ಜಿ. ವೆಂಕಟೇಶ್ವರ, ಡಾ.ಕೆ. ಸೋಮಶೇಖರ್, ಶಶಿಕುಮಾರ್, ಜಿ.ಎಂ. ವೆಂಕಟೇಶ್ ಉತ್ಕೃಷ್ಟ, ಮೌಲ್ಯಾಧಾರಿತ ಹಾಗೂ ನೀತಿ ಬೋಧಕ ಸ್ವರಚಿತ ಕವನಗಳ ವಾಚನ ಮಾಡಿದರು. ಮೈಲಾಪುರ ಲೋಕೇಶ್ ಮತ್ತು ಟಿ.ಎಂ. ಈಶ್ವರಸಿಂಗ್ ಕಾರ್ಯಕ್ರಮಕ್ಕೆ ತಾಂತ್ರಿಕ ಸಹಕಾರ ನೀಡಿದರು. ಶ್ರೀನಿವಾಸರೆಡ್ಡಿ, ಸಿ.ಎನ್. ಕೃಷ್ಣಪ್ಪ, ಸುಧಾಮಣಿ ಇದ್ದರು.