ಶಿಡ್ಲಘಟ್ಟ: ಕೃಷಿ ವಿದ್ಯಾರ್ಥಿಗಳು ಕೃಷಿ ಅಧಿಕಾರಿಗಳಾಗಿ ಹಳ್ಳಿಗಳ ಕಡೆ ಹೊರಟಾಗ ಆಕಸ್ಮಿಕವಾಗಿ ಅವರಿಗೆ ಕಾಣಸಿಗಬಹುದಾದ ವೀರಗಲ್ಲು, ಶಾಸನಗಳ ಬಗ್ಗೆ ಪ್ರಾಥಮಿಕ ಮಾಹಿತಿ ತಿಳಿದಿರುವುದು ಅಗತ್ಯ ಎಂದು ಇತಿಹಾಸ ಅಕಾಡೆಮಿಯ ಸದಸ್ಯ, ಶಾಸನತಜ್ಞ ಕೆ.ಧನಪಾಲ್ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ಕೃಷಿ ವಿದ್ಯಾರ್ಥಿಗಳ ಕೃಷಿ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಶಾಸನ ಮತ್ತು ವೀರಗಲ್ಲುಗಳ ಪ್ರಾಥಮಿಕ ಪರಿಚಯ ಶಿಬಿರದಲ್ಲಿ ಮಾತನಾಡಿದರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರಿಂದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ಹಮ್ಮಿಕೊಂಡು ಶಾಸನ, ವೀರಗಲ್ಲು, ಸ್ಮಾರಕಗಳನ್ನು ಸಂರಕ್ಷಿಸುವ ಕಾರ್ಯವನ್ನು ನಡೆಸುತ್ತಾ ಬಂದಿದೆಎಂದರು.
ಸುತ್ತಮುತ್ತಲ ಹೊಲಗದ್ದೆಗಳಲ್ಲಿದ್ದ ಕೆಲವು ಶಾಸನ, ವೀರಗಲ್ಲುಗಳನ್ನು ವಿದ್ಯಾರ್ಥಿಗಳಿಗೆ ಪ್ರತ್ಯಕ್ಷವಾಗಿ ಪರಿಚಯ ಮಾಡಿಕೊಡಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಇತಿಹಾಸ ತಜ್ಞ ಡಿ.ಎನ್.ಸುದರ್ಶನ ರೆಡ್ಡಿ, ಮೂರ್ತಿ, ಮುನೀಂದ್ರ, ನಾರಾಯಣಸ್ವಾಮಿ, ಜಯಂತ್, ಕೃಷ್ಣೇಗೌಡ, ವೆಂಕಟೇಶ್ ಇದ್ದರು.