<p><strong>ಬಾಗೇಪಲ್ಲಿ</strong>: ಕಿತ್ತುಹೋದ ಡಾಂಬರು, ರಸ್ತೆಯೆಲ್ಲ ಕಲ್ಲು, ಜಲ್ಲಿ, ಮೊಣಕಾಲುದ್ದ ಗುಂಡಿ, ಚರಂಡಿ ಇಲ್ಲದೇ ಕಲುಷಿತ ನೀರು ಸಂಗ್ರಹ, ವಾಹನಗಳ ಸವಾರರ ಪರದಾಟ... ಹೀಗೆ ಪಟ್ಟಣದಿಂದ ಸಾರಿಗೆ ಬಸ್ ಡಿಪೊಗೆ ಸಂಚರಿಸುವ ರಸ್ತೆ ಡಾಂಬರು ಆಗದೇ ಜನ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ.</p>.<p>ಪಟ್ಟಣದ ಮುಖ್ಯರಸ್ತೆಯಿಂದ ಪ್ರವಾಸಿ ಮಂದಿರದ ಪಕ್ಕ ಸಾರಿಗೆ ಡಿಪೊ ಘಟಕಕ್ಕೆ ಸಂಚರಿಸುವ ರಸ್ತೆ ಇದೆ. ಇದೇ ರಸ್ತೆ ಮೂಲಕ ಹೊಸಹುಡ್ಯ ಗ್ರಾಮಕ್ಕೆ ಸಂಪರ್ಕ ರಸ್ತೆ ಇದೆ. ಪ್ರತಿದಿನ ಗ್ರಾಮದ ಜನರು ಸಂಚರಿಸುತ್ತಾರೆ.</p>.<p>ಪಟ್ಟಣದ ಮುಖ್ಯರಸ್ತೆಯಿಂದ ರಾಜ್ಯ ರಸ್ತೆ ಸಾರಿಗೆ ಘಟಕದ ತಿರುವಿನವರೆಗೆ ರಸ್ತೆಗೆ ಡಾಂಬರು ಮಾಡಿಲ್ಲ. ಬಸ್, ಲಾರಿ ಸಂಚಾರದಿಂದ ಮೊಣಕಾಲುದ್ದ ಗುಂಡಿ ಬಿದ್ದಿವೆ.</p>.<p>ಇದೇ ರಸ್ತೆಯಲ್ಲಿ ಕಾರು, ಆಟೊ, ದ್ವಿಚಕ್ರ ವಾಹನ ರಿಪೇರಿ ಅಂಗಡಿ ಇವೆ. ಪ್ರತಿದಿನ ನೂರಾರು ಜನರು ವಾಹನಗಳಲ್ಲಿ ಸಂಚರಿಸುತ್ತಾರೆ. ನೀರಿನ ಗುಂಡಿ ಕಾಣದೇ, ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯವಾಗಿರುವ ಘಟನೆಗಳು ವರದಿಯಾಗಿವೆ.</p>.<p>ಹೊಸಹುಡ್ಯ ಗ್ರಾಮದಿಂದ ಡಿಪೊ ತಿರುವಿನವರೆಗೆ ರಸ್ತೆ ಉತ್ತಮವಾಗಿದೆ. ಆದರೆ ಡಿಪೊ ತಿರುವಿನಿಂದ ಮುಖ್ಯರಸ್ತೆಯವರೆಗೆ ತೊಂದರೆ ಆಗಿದೆ. ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲ. ಮಕ್ಕಳನ್ನು, ರೋಗಿಗಳನ್ನು ಬೈಕ್, ಆಟೊಗಳಲ್ಲಿ ಕರೆದುಕೊಂಡು ಹೋಗಬೇಕಾಗಿದೆ ಎಂದು ಗ್ರಾಮದ ಮುಖಂಡ ಹೊಸಹುಡ್ಯ ಶ್ರೀನಿವಾಸರೆಡ್ಡಿ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-16-1481102059</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗೇಪಲ್ಲಿ</strong>: ಕಿತ್ತುಹೋದ ಡಾಂಬರು, ರಸ್ತೆಯೆಲ್ಲ ಕಲ್ಲು, ಜಲ್ಲಿ, ಮೊಣಕಾಲುದ್ದ ಗುಂಡಿ, ಚರಂಡಿ ಇಲ್ಲದೇ ಕಲುಷಿತ ನೀರು ಸಂಗ್ರಹ, ವಾಹನಗಳ ಸವಾರರ ಪರದಾಟ... ಹೀಗೆ ಪಟ್ಟಣದಿಂದ ಸಾರಿಗೆ ಬಸ್ ಡಿಪೊಗೆ ಸಂಚರಿಸುವ ರಸ್ತೆ ಡಾಂಬರು ಆಗದೇ ಜನ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ.</p>.<p>ಪಟ್ಟಣದ ಮುಖ್ಯರಸ್ತೆಯಿಂದ ಪ್ರವಾಸಿ ಮಂದಿರದ ಪಕ್ಕ ಸಾರಿಗೆ ಡಿಪೊ ಘಟಕಕ್ಕೆ ಸಂಚರಿಸುವ ರಸ್ತೆ ಇದೆ. ಇದೇ ರಸ್ತೆ ಮೂಲಕ ಹೊಸಹುಡ್ಯ ಗ್ರಾಮಕ್ಕೆ ಸಂಪರ್ಕ ರಸ್ತೆ ಇದೆ. ಪ್ರತಿದಿನ ಗ್ರಾಮದ ಜನರು ಸಂಚರಿಸುತ್ತಾರೆ.</p>.<p>ಪಟ್ಟಣದ ಮುಖ್ಯರಸ್ತೆಯಿಂದ ರಾಜ್ಯ ರಸ್ತೆ ಸಾರಿಗೆ ಘಟಕದ ತಿರುವಿನವರೆಗೆ ರಸ್ತೆಗೆ ಡಾಂಬರು ಮಾಡಿಲ್ಲ. ಬಸ್, ಲಾರಿ ಸಂಚಾರದಿಂದ ಮೊಣಕಾಲುದ್ದ ಗುಂಡಿ ಬಿದ್ದಿವೆ.</p>.<p>ಇದೇ ರಸ್ತೆಯಲ್ಲಿ ಕಾರು, ಆಟೊ, ದ್ವಿಚಕ್ರ ವಾಹನ ರಿಪೇರಿ ಅಂಗಡಿ ಇವೆ. ಪ್ರತಿದಿನ ನೂರಾರು ಜನರು ವಾಹನಗಳಲ್ಲಿ ಸಂಚರಿಸುತ್ತಾರೆ. ನೀರಿನ ಗುಂಡಿ ಕಾಣದೇ, ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯವಾಗಿರುವ ಘಟನೆಗಳು ವರದಿಯಾಗಿವೆ.</p>.<p>ಹೊಸಹುಡ್ಯ ಗ್ರಾಮದಿಂದ ಡಿಪೊ ತಿರುವಿನವರೆಗೆ ರಸ್ತೆ ಉತ್ತಮವಾಗಿದೆ. ಆದರೆ ಡಿಪೊ ತಿರುವಿನಿಂದ ಮುಖ್ಯರಸ್ತೆಯವರೆಗೆ ತೊಂದರೆ ಆಗಿದೆ. ಗ್ರಾಮಕ್ಕೆ ಬಸ್ ಸೌಲಭ್ಯ ಇಲ್ಲ. ಮಕ್ಕಳನ್ನು, ರೋಗಿಗಳನ್ನು ಬೈಕ್, ಆಟೊಗಳಲ್ಲಿ ಕರೆದುಕೊಂಡು ಹೋಗಬೇಕಾಗಿದೆ ಎಂದು ಗ್ರಾಮದ ಮುಖಂಡ ಹೊಸಹುಡ್ಯ ಶ್ರೀನಿವಾಸರೆಡ್ಡಿ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-16-1481102059</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>