<p>ಚೇಳೂರು: ಪಟ್ಟಣದ ಹೋಟೆಲ್ ಹಾಗೂ ಉಪಾಹಾರ ಮಂದಿರಗಳಲ್ಲಿ ವಾಣಿಜ್ಯ ಸಿಲಿಂಡರ್ಗಳ ಬದಲಿಗೆ ನಿಯಮಬಾಹಿರವಾಗಿ ಗೃಹಬಳಕೆಯ ಸಿಲಿಂಡರ್ ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದ್ದರೂ ತಾಲ್ಲೂಕು ಆಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಈ ನಡುವೆ ಸಾರ್ವಜನಿಕರ ದೂರಿಗೆ ಮಣಿದು ಕಾಟಾಚಾರದ ದಾಳಿಯನ್ನೂ ನಡೆಸಿದೆ.</p>.<p>ಹಲವು ದಿನಗಳಿಂದ ಚೇಳೂರಿನ ಬಹುತೇಕ ಹೋಟೆಲ್ಗಳಲ್ಲಿ ಸಬ್ಸಿಡಿ ಸಹಿತ ಗೃಹಬಳಕೆಯ ಸಿಲಿಂಡರ್ಗಳನ್ನು ರಾಜಾರೋಷವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಗಳಿದ್ದವು. ಈ ಬಗ್ಗೆ ಮೇಲಧಿಕಾರಿಗಳಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ತಾಲ್ಲೂಕು ಆಡಳಿತದ ಅಧಿಕಾರಿಗಳು ಪಟ್ಟಣದಲ್ಲಿ ದಾಳಿ ನಡೆಸಿದ್ದಾರೆ.</p>.<p>ಆದರೆ, ಇಡೀ ಪಟ್ಟಣದಲ್ಲಿ ಹತ್ತಾರು ಹೋಟೆಲ್ಗಳಿದ್ದರೂ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು ಮಾತ್ರ ಕೇವಲ ಎರಡು ಹೋಟೆಲ್ಗಳು! ಪಟ್ಟಣದ ಪ್ರಮುಖ ಎರಡೇ ಹೋಟೆಲ್ಗಳ ಮೇಲೆ ಮಾತ್ರ ದಾಳಿ ನಡೆಸಿರುವ ಅಧಿಕಾರಿಗಳು, ತಲಾ ಒಂದು ಗೃಹಬಳಕೆ ಸಿಲಿಂಡರ್ ವಶಪಡಿಸಿಕೊಂಡು ಕೈ ತೊಳೆದುಕೊಂಡಿದ್ದಾರೆ.</p>.<p>ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಿಗೆ ರಜೆ ಇರುವ ದಿನದಂದು ಇಂತಹ ದಾಳಿಗಳು ನಡೆಯುವುದು ಕಡಿಮೆ. ಆದರೆ ಚೇಳೂರಿನಲ್ಲಿ ರಜಾ ದಿನವೇ ಅಧಿಕಾರಿಗಳು ದಾಳಿ ಮಾಡಿದ್ದಾರೆ.</p>.<p>ದೊಡ್ಡ ಹೋಟೆಲ್ ಮಾಲೀಕರಿಗೆ ದಾಳಿಯ ಮಾಹಿತಿ ಮುಂಚೆಯೇ ದೊರೆತಿತ್ತೇ? ಸಣ್ಣ ಪುಟ್ಟ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿವೆ.</p>.<p>ವಾಣಿಜ್ಯ ಸಿಲಿಂಡರ್ ಮತ್ತು ಗೃಹಬಳಕೆ ಸಿಲಿಂಡರ್ಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸವಿದೆ. ಹೋಟೆಲ್ ಮಾಲೀಕರು ಲಾಭದ ಆಸೆಗೆ ಬಿದ್ದು ಬಡವರಿಗೆ ಸಿಗಬೇಕಾದ ಸಬ್ಸಿಡಿ ಸಿಲಿಂಡರ್ಗಳನ್ನು ಅಕ್ರಮವಾಗಿ ಬಳಸುತ್ತಿದ್ದಾರೆ.</p>.<p>ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಸೋರಿಕೆಯಾಗುತ್ತಿದೆ. ಚೇಳೂರಿನ ಬಹುತೇಕ ಕಡೆಗಳಲ್ಲಿ ಸಿಲಿಂಡರ್ ರಿಫಿಲ್ಲಿಂಗ್ ದಂಧೆ ಕೂಡ ಅವ್ಯಾಹತವಾಗಿದೆ.</p>.<p>ಅಧಿಕಾರಿಗಳು ದಾಳಿ ಮಾಡುವುದಾದರೆ ಪಟ್ಟಣದ ಎಲ್ಲಾ ಹೋಟೆಲ್ಗಳನ್ನು ಸಮಾನವಾಗಿ ಪರಿಶೀಲಿಸಬೇಕು. ಕೇವಲ ಎರಡು ಹೋಟೆಲ್ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಸರಿಯಲ್ಲ. ಇದು ಕೇವಲ ಮೇಲಧಿಕಾರಿಗಳಿಗೆ ತೋರಿಸಲು ನಡೆಸಿದ ನಾಟಕದಂತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಚೇಳೂರು ಪಟ್ಟಣದಾದ್ಯಂತ ದಾಳಿ ನಡೆಸಿದ್ದು ಪ್ರಮುಖ ಎರಡು ಹೋಟೆಲ್ಗಳಲ್ಲಿ ಎರಡು ಗೃಹಬಳಕೆ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದೇವೆ. ನಮಗೆ ಯಾವುದೇ ಒತ್ತಡವಿಲ್ಲ’ ಎಂದು ತಹಶೀಲ್ದಾರ್ ಶ್ವೇತಾ ಬಿ.ಕೆ ತಿಳಿಸಿದ್ದಾರೆ.</p>.<p>‘ನಾವು ಒಂದು ಕಡೆ ದಾಳಿ ಮಾಡುತ್ತಿದ್ದರೆ, ಮಿಕ್ಕಿದವರೆಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ಈ ದಾಳಿ ಇದೇ ಕೊನೆಯಲ್ಲ. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಮುಂದುವರಿ ಯುತ್ತದೆ’ ಎಂದಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260322-16-1202345751</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚೇಳೂರು: ಪಟ್ಟಣದ ಹೋಟೆಲ್ ಹಾಗೂ ಉಪಾಹಾರ ಮಂದಿರಗಳಲ್ಲಿ ವಾಣಿಜ್ಯ ಸಿಲಿಂಡರ್ಗಳ ಬದಲಿಗೆ ನಿಯಮಬಾಹಿರವಾಗಿ ಗೃಹಬಳಕೆಯ ಸಿಲಿಂಡರ್ ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದ್ದರೂ ತಾಲ್ಲೂಕು ಆಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಈ ನಡುವೆ ಸಾರ್ವಜನಿಕರ ದೂರಿಗೆ ಮಣಿದು ಕಾಟಾಚಾರದ ದಾಳಿಯನ್ನೂ ನಡೆಸಿದೆ.</p>.<p>ಹಲವು ದಿನಗಳಿಂದ ಚೇಳೂರಿನ ಬಹುತೇಕ ಹೋಟೆಲ್ಗಳಲ್ಲಿ ಸಬ್ಸಿಡಿ ಸಹಿತ ಗೃಹಬಳಕೆಯ ಸಿಲಿಂಡರ್ಗಳನ್ನು ರಾಜಾರೋಷವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಗಳಿದ್ದವು. ಈ ಬಗ್ಗೆ ಮೇಲಧಿಕಾರಿಗಳಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ತಾಲ್ಲೂಕು ಆಡಳಿತದ ಅಧಿಕಾರಿಗಳು ಪಟ್ಟಣದಲ್ಲಿ ದಾಳಿ ನಡೆಸಿದ್ದಾರೆ.</p>.<p>ಆದರೆ, ಇಡೀ ಪಟ್ಟಣದಲ್ಲಿ ಹತ್ತಾರು ಹೋಟೆಲ್ಗಳಿದ್ದರೂ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು ಮಾತ್ರ ಕೇವಲ ಎರಡು ಹೋಟೆಲ್ಗಳು! ಪಟ್ಟಣದ ಪ್ರಮುಖ ಎರಡೇ ಹೋಟೆಲ್ಗಳ ಮೇಲೆ ಮಾತ್ರ ದಾಳಿ ನಡೆಸಿರುವ ಅಧಿಕಾರಿಗಳು, ತಲಾ ಒಂದು ಗೃಹಬಳಕೆ ಸಿಲಿಂಡರ್ ವಶಪಡಿಸಿಕೊಂಡು ಕೈ ತೊಳೆದುಕೊಂಡಿದ್ದಾರೆ.</p>.<p>ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಿಗೆ ರಜೆ ಇರುವ ದಿನದಂದು ಇಂತಹ ದಾಳಿಗಳು ನಡೆಯುವುದು ಕಡಿಮೆ. ಆದರೆ ಚೇಳೂರಿನಲ್ಲಿ ರಜಾ ದಿನವೇ ಅಧಿಕಾರಿಗಳು ದಾಳಿ ಮಾಡಿದ್ದಾರೆ.</p>.<p>ದೊಡ್ಡ ಹೋಟೆಲ್ ಮಾಲೀಕರಿಗೆ ದಾಳಿಯ ಮಾಹಿತಿ ಮುಂಚೆಯೇ ದೊರೆತಿತ್ತೇ? ಸಣ್ಣ ಪುಟ್ಟ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿವೆ.</p>.<p>ವಾಣಿಜ್ಯ ಸಿಲಿಂಡರ್ ಮತ್ತು ಗೃಹಬಳಕೆ ಸಿಲಿಂಡರ್ಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸವಿದೆ. ಹೋಟೆಲ್ ಮಾಲೀಕರು ಲಾಭದ ಆಸೆಗೆ ಬಿದ್ದು ಬಡವರಿಗೆ ಸಿಗಬೇಕಾದ ಸಬ್ಸಿಡಿ ಸಿಲಿಂಡರ್ಗಳನ್ನು ಅಕ್ರಮವಾಗಿ ಬಳಸುತ್ತಿದ್ದಾರೆ.</p>.<p>ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಸೋರಿಕೆಯಾಗುತ್ತಿದೆ. ಚೇಳೂರಿನ ಬಹುತೇಕ ಕಡೆಗಳಲ್ಲಿ ಸಿಲಿಂಡರ್ ರಿಫಿಲ್ಲಿಂಗ್ ದಂಧೆ ಕೂಡ ಅವ್ಯಾಹತವಾಗಿದೆ.</p>.<p>ಅಧಿಕಾರಿಗಳು ದಾಳಿ ಮಾಡುವುದಾದರೆ ಪಟ್ಟಣದ ಎಲ್ಲಾ ಹೋಟೆಲ್ಗಳನ್ನು ಸಮಾನವಾಗಿ ಪರಿಶೀಲಿಸಬೇಕು. ಕೇವಲ ಎರಡು ಹೋಟೆಲ್ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಸರಿಯಲ್ಲ. ಇದು ಕೇವಲ ಮೇಲಧಿಕಾರಿಗಳಿಗೆ ತೋರಿಸಲು ನಡೆಸಿದ ನಾಟಕದಂತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ಚೇಳೂರು ಪಟ್ಟಣದಾದ್ಯಂತ ದಾಳಿ ನಡೆಸಿದ್ದು ಪ್ರಮುಖ ಎರಡು ಹೋಟೆಲ್ಗಳಲ್ಲಿ ಎರಡು ಗೃಹಬಳಕೆ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದೇವೆ. ನಮಗೆ ಯಾವುದೇ ಒತ್ತಡವಿಲ್ಲ’ ಎಂದು ತಹಶೀಲ್ದಾರ್ ಶ್ವೇತಾ ಬಿ.ಕೆ ತಿಳಿಸಿದ್ದಾರೆ.</p>.<p>‘ನಾವು ಒಂದು ಕಡೆ ದಾಳಿ ಮಾಡುತ್ತಿದ್ದರೆ, ಮಿಕ್ಕಿದವರೆಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ಈ ದಾಳಿ ಇದೇ ಕೊನೆಯಲ್ಲ. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಮುಂದುವರಿ ಯುತ್ತದೆ’ ಎಂದಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260322-16-1202345751</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>