ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ‘ಬಸವಣ್ಣ, ಗಾಂಧೀಜಿ, ವಿವೇಕಾನಂದರು ಮಾನವೀಯತೆಯ ಪಾಠವನ್ನೇ ಬೋಧಿಸುತ್ತಾ ಅದರ ಪ್ರತಿಪಾದನೆಗಾಗಿ ಬದುಕಿ ಬಾಳಿದವರು. ಆದುದರಿಂದಲೇ ಭಾರತದಲ್ಲಿ ಮಾನವೀಯತೆಯ ಅಂತಃಸತ್ವ ಅವ್ಯಾಹತವಾಗಿ ಹರಿದು ಬಂದಿದೆ. ಇದನ್ನು ಉಳಿಸಿ ಬೆಳೆಸಬೇಕಾಗಿರುವುದು ಎಲ್ಲರ ಕರ್ತವ್ಯ’ ಎಂದು ಹೇಳಿದರು.