ಕೊರೊನಾ ಸೃಷ್ಟಿಸಿದ ವಿಪತ್ತು ರೈತರು ಬೆಳೆದ ಹೂವು , ಹಣ್ಣು , ತರಕಾರಿಗಳಿಗೆ ನಿರ್ದಿಷ್ಟ ಮಾರುಕಟ್ಟೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಅನೇಕ ರೈತರು ತೋಟದಲ್ಲಿ ಬೆಳೆದ ಫಸಲು ಕಣ್ಣೆದುರೆ ಹಾಳಾಗುವುದು ನೋಡಲಾಗದೆ ಸಮೀಪದ ನಗರ, ಪಟ್ಟಣಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಹಾಕಿದ ಬಂಡವಾಳವನ್ನಾದರೂ ಹಿಂಪಡೆಯಲು ತವಕಿಸುತ್ತಿದ್ದಾರೆ.