ಗುಡಿಬಂಡೆ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಚಾಕು ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ‘ವಿದ್ಯುತ್ ಮಹೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಡಾ.ಕೆ.ಸುಧಾಕರ್ ಪಾಲ್ಗೊಂಡಿದ್ದರು. ಸಭೆ ಮುಗಿದ ನಂತರ ಸಚಿವರು ಸಾರ್ವಜನಿಕರ ಜತೆ ಮಾತನಾಡುತ್ತಿದ್ದರು. ಈ ವೇಳೆ ಬೀಚಗಾನಹಳ್ಳಿಯ ಗಂಗರಾಜು ಸಚಿವರತ್ತ ತೆರಳುತ್ತಿದ್ದರು ಎನ್ನಲಾಗಿದೆ.
ಹೆಚ್ಚಿದ್ದಜನರನ್ನು ಕಾನ್ಸ್ಟೆಬಲ್ ಕರಿಬಾಬು ತಳ್ಳಿದ್ದು ಈ ವೇಳೆ ಗಂಗರಾಜು ಹೊಟ್ಟೆಯ ಬಳಿಯಿದ್ದ ಚಾಕು ಕರಿಬಾಬು ಕೈಗೆ ತಗುಲಿದೆ. ತಕ್ಷಣ ಪೊಲೀಸರು ಗಂಗರಾಜುವನ್ನು ವಶಕ್ಕೆ ಪಡೆದು ಪೆರೇಸಂದ್ರ ಠಾಣೆಗೆ ಕರೆದೊಯ್ದರು.