ಈ ಭೇಟಿ ಕುರಿತಂತೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಎಚ್.ವಿ.ಮಂಜುನಾಥ್, ‘ದೆಹಲಿಯಲ್ಲಿ 2015ರಲ್ಲಿ ಎಎಪಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ, ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ಬೋಧನಾ ವಿಧಾನ ಹಾಗೂ ಶಿಕ್ಷಣ ಗುಣಮಟ್ಟ ಸುಧಾರಣೆಯಾಗಿರುವ ಬಗ್ಗೆ ಕೇಳಿದ್ದೆ. ಆದರೆ, ಬಹಳ ವರ್ಷಗಳಿಂದ ದೆಹಲಿ ಶಾಲೆಗಳನ್ನು ನೋಡಬೇಕು ಎಂಬ ಆಸೆ ಈಡೇರಿರಲಿಲ್ಲ’ ಎಂದು ಹೇಳಿದರು.