ಬಾಗೇಪಲ್ಲಿ: ತಾಲ್ಲೂಕಿನ ದೇವರಗುಡಿಪಲ್ಲಿ(ಗಡಿದಂ) ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸೋಂಕು ತಡೆಗೆ ಮಾಸ್ಕ್ಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಶಿವರಾಮರೆಡ್ಡಿ, ಸೋಂಕು ತಡೆಗೆ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಹಾಲು ಹಾಕಲು ಬಂದಾಗ, ಬೇರೆಡೆ ಸಂಚರಿಸುವಾಗ ತಪ್ಪದೇ ಮಾಸ್ಕ ಅನ್ನು ಹಾಕಬೇಕು. ಕೈ-ಕಾಲುಗಳನ್ನು ತೊಳೆಯಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಗುಣಮಟ್ಟದ ಆಹಾರ, ಬಿಸಿ ನೀರನ್ನು ಆರಿಸಿ ಕಾಲಕಾಲಕ್ಕೆ ಕುಡಿಯಬೇಕು ಎಂದು ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಸತ್ಯನಾರಾಯಣ, ನಿರ್ದೇಶಕರಾದ ಚಂದ್ರಶೇಖರರೆಡ್ಡಿ, ವೆಂಕಟಶಿವಪ್ಪ, ಆದಿನಾರಾಯಣಪ್ಪ, ಎಂ.ಶ್ರೀನಿವಾಸ್, ನಾಗರಾಜ ಇದ್ದರು.