‘ಬಿಬಿಎಂಪಿ ಚುನಾವಣೆಯಲ್ಲಿ ನನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ನನಗೆ ಭಾಷಣ ಮಾಡಲು ಅವಕಾಶ ನೀಡಲಿಲ್ಲ. ಪೊಲೀಸರ ಮೂಲಕ ನಿರ್ಬಂಧ ಹೇರಿತು. ಭಾಷಣ ಮಾಡುವುದಿಲ್ಲ, ಪಾದಯಾತ್ರೆ ಮಾಡುತ್ತೇನೆ ಅಂದರೂ ಬಿಡಲಿಲ್ಲ. ವಾಸ್ತವ್ಯ ಹೂಡಿದ್ದ ಹೋಟೆಲ್ನಿಂದಲೂ ಬಲವಂತವಾಗಿ ಹೊರಗೆ ಕಳಿಸಿದರು. ಬೆಂಗಳೂರಿನ ಹೊರವಲಯದಲ್ಲಿ ನಾನು ಉಳಿದುಕೊಳ್ಳಬೇಕಾಯಿತು. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ’ ಎಂದರು.