<p><strong>ಚಿಕ್ಕಬಳ್ಳಾಪುರ</strong>: ಮೃತ ಬಾಬು ಅವರ ಗೌರಿಬಿದನೂರು ತಾಲ್ಲೂಕಿನ ಇಡುಗೂರು ನಿವಾಸಕ್ಕೆ ಶಾಸಕ ಪ್ರದೀಪ್ ಈಶ್ವರ್ ಭಾನುವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. </p>.<p>ಮೃತ ಬಾಬು ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಿದರು. ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ತಮ್ಮನ್ನು ಸಂಪರ್ಕಿಸಿ ಮತ್ತು ಬಾಬು ಸಾವಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.</p>.<p>‘ನಿಮಗೆ ಆರ್ಥಿಕ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೆ ತಿಳಿಸಿ’ ಎಂದರು. ಆಗ ಸ್ಥಳದಲ್ಲಿ ಇದ್ದವರು, ‘ಕುಟುಂಬದ ಆರ್ಥಿಕ ಸ್ಥಿತಿ ಕಷ್ಟವಿದೆ. ಅವರು ಬಡವರು’ ಎಂದರು. ಆಗ ಪ್ರದೀಪ್ ಈಶ್ವರ್, ಕಾನೂನು ಪ್ರಕಾರ ಕುಟುಂಬಕ್ಕೆ ಯಾವ ಸೌಲಭ್ಯಗಳು ದೊರೆಯಬೇಕೊ ಆ ಸೌಲಭ್ಯಗಳನ್ನು ದೊರಕಿಸಿಕೊಡುವೆ. ಈಗ ಪ್ರಕರಣ ತನಿಖೆ ಹಂತದಲ್ಲಿದೆ. ನಾನು ಆರ್ಥಿಕ ನೆರವು ಘೋಷಿಸಿದರೆ ತಪ್ಪು ಸಂದೇಶ ಹೋಗುತ್ತದೆ. ನಾನು ಖಂಡಿತವಾಗಿ ನಿಮಗೆ ಏನು ಸಹಾಯ ಮಾಡಬೇಕೊ ಅದನ್ನು ಮಾಡುತ್ತೇನೆ ಎಂದರು.</p>.<p>ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ‘ಇನ್ನೆರಡು ದಿನಗಳಲ್ಲಿ ಬಾಬು ಅವರ ಪತ್ನಿಯ ಖಾತೆಗೆ ಸರ್ಕಾರದಿಂದ ಮೊದಲ ಹಂತದಲ್ಲಿ ₹ 4.12 ಲಕ್ಷ ಜಮೆ ಆಗಲಿದೆ. ಪ್ರಕರಣದ ಚಾರ್ಜ್ಶೀಟ್ ಆದ ಮೇಲೆ ಮತ್ತೆ ₹ 4.50 ಲಕ್ಷ ದೊರೆಯಲಿದೆ ಎಂದು ಹೇಳಿದರು.</p>.<p>ಬಾಬು ಪತ್ನಿಗೆ ಕಾಯಂ ಉದ್ಯೋಗ ದೊರಕಿಸಿಕೊಡುವೆ. ಈ ಸಂಬಂಧ ಮುಖ್ಯಮಂತ್ರಿ, ಸ್ವೀಕರ್ ಅವರ ಜೊತೆ ಮಾತುಕತೆ ನಡೆಸುವೆ. ಅವರ ತಾಯಿಗೂ ಕೆಲಸ ಮತ್ತು ಪಿಂಚಣಿ ಕೊಡಿಸಲಾಗುವುದು. ಈಗ ಬಾಬು ಅವರ ಸಹೋದರನೇ ಆ ಕುಟುಂಬಕ್ಕೆ ಆಧಾರ. ಅವರಿಗೂ ಕೆಲಸ ಕೊಡಿಸುವೆ. ಸರ್ಕಾರದಿಂದ ಈ ಕುಟುಂಬಕ್ಕೆ ಯಾವ ಸೌಲಭ್ಯಗಳು ದೊರಕಲಿವೆಯೇ ಆ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವೆ ಎಂದು ಭರವಸೆ ನೀಡಿದರು.</p>.<p>ಬಿಜೆಪಿಯವರು ಗೌರಿಬಿದನೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಆದರೆ ಸೌಜನ್ಯಕ್ಕೂ ಬಂದು ಈ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ. ಅಯೋಗ್ಯ ಬಿಜೆಪಿಯವರಿಗೆ ಸಾಮಾನ್ಯ ಜ್ಞಾನವಿದೆಯಾ? ಬರಿ ಪ್ರಕರಣದಿಂದ ಸುಧಾಕರ್ ಹೆಸರು ಕೈಬಿಡಿ ಎನ್ನುತ್ತಿದ್ದಾರೆ. ಆದರೆ ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.</p>.<p>ದಲಿತರ ಸಾವಿಗೆ ಗೌರವವಿಲ್ಲವೇ. ಮೇಲ್ವರ್ಗದವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೀಗೆ ಸತ್ತಿದ್ದರೆ ನಗರಕ್ಕೆ ಬೆಂಕಿ ಇಡುತ್ತಿದ್ದರು. ದಲಿತರ ಪಾಡೇ ಇಷ್ಟೇ. ದಲಿತರು ಸಾವಿರಾರು ವರ್ಷದಿಂದ ಶೋಷಣೆಗೆ ಒಳಗಾಗಿದ್ದಾರೆ. ಡೆತ್ನೋಟ್ನಲ್ಲಿ ಏನು ಬರೆದಿದ್ದಾರೆಯೊ ಆ ರೀತಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ನಾನು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.</p>.<p>ಬಾಬು ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ₹ 13 ಲಕ್ಷ ವಿಮೆ ಹಣ ಬಂದಿತ್ತು. ಅದರ ಜೊತೆಗೆ ಮತ್ತಷ್ಟು ಹಣ ಸೇರಿಸಿ ಚಾಲಕನ ಕೆಲಸ ಕೊಡಿಸಲು ನೀಡಿದ್ದಾಗಿ ಅವರ ತಾಯಿ ಹೇಳಿದರು ಎಂದರು. </p>.<p> <strong>‘ಪವರ್ ಬಳಸಿದ್ದರೆ ಅಣಕನೂರಿನಲ್ಲಿ ಇರುತ್ತಿದ್ದರು’</strong></p><p> ‘ನಾನು ಶಾಸಕ ಸ್ಥಾನವನ್ನು ಜವಾಬ್ದಾರಿ ಎಂದುಕೊಂಡಿದ್ದೇನೆ. ಪವರ್ ಎಂದಿಕೊಂಡಿದ್ದರೆ ನೀವು (ಡಾ.ಕೆ.ಸುಧಾಕರ್) ಅಣಕನೂರಿನಲ್ಲಿ (ಜಿಲ್ಲಾ ಕಾರಾಗೃಹ) ಇರುತ್ತಿದ್ದಿರಿ. ಸಾವಿನಲ್ಲಿ ರಾಜಕೀಯ ಮಾಡುವುದಿಲ್ಲ. ಆದರೆ ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡುತ್ತೇವೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಮೃತ ಬಾಬು ಅವರ ಗೌರಿಬಿದನೂರು ತಾಲ್ಲೂಕಿನ ಇಡುಗೂರು ನಿವಾಸಕ್ಕೆ ಶಾಸಕ ಪ್ರದೀಪ್ ಈಶ್ವರ್ ಭಾನುವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. </p>.<p>ಮೃತ ಬಾಬು ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಿದರು. ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ತಮ್ಮನ್ನು ಸಂಪರ್ಕಿಸಿ ಮತ್ತು ಬಾಬು ಸಾವಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.</p>.<p>‘ನಿಮಗೆ ಆರ್ಥಿಕ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೆ ತಿಳಿಸಿ’ ಎಂದರು. ಆಗ ಸ್ಥಳದಲ್ಲಿ ಇದ್ದವರು, ‘ಕುಟುಂಬದ ಆರ್ಥಿಕ ಸ್ಥಿತಿ ಕಷ್ಟವಿದೆ. ಅವರು ಬಡವರು’ ಎಂದರು. ಆಗ ಪ್ರದೀಪ್ ಈಶ್ವರ್, ಕಾನೂನು ಪ್ರಕಾರ ಕುಟುಂಬಕ್ಕೆ ಯಾವ ಸೌಲಭ್ಯಗಳು ದೊರೆಯಬೇಕೊ ಆ ಸೌಲಭ್ಯಗಳನ್ನು ದೊರಕಿಸಿಕೊಡುವೆ. ಈಗ ಪ್ರಕರಣ ತನಿಖೆ ಹಂತದಲ್ಲಿದೆ. ನಾನು ಆರ್ಥಿಕ ನೆರವು ಘೋಷಿಸಿದರೆ ತಪ್ಪು ಸಂದೇಶ ಹೋಗುತ್ತದೆ. ನಾನು ಖಂಡಿತವಾಗಿ ನಿಮಗೆ ಏನು ಸಹಾಯ ಮಾಡಬೇಕೊ ಅದನ್ನು ಮಾಡುತ್ತೇನೆ ಎಂದರು.</p>.<p>ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ‘ಇನ್ನೆರಡು ದಿನಗಳಲ್ಲಿ ಬಾಬು ಅವರ ಪತ್ನಿಯ ಖಾತೆಗೆ ಸರ್ಕಾರದಿಂದ ಮೊದಲ ಹಂತದಲ್ಲಿ ₹ 4.12 ಲಕ್ಷ ಜಮೆ ಆಗಲಿದೆ. ಪ್ರಕರಣದ ಚಾರ್ಜ್ಶೀಟ್ ಆದ ಮೇಲೆ ಮತ್ತೆ ₹ 4.50 ಲಕ್ಷ ದೊರೆಯಲಿದೆ ಎಂದು ಹೇಳಿದರು.</p>.<p>ಬಾಬು ಪತ್ನಿಗೆ ಕಾಯಂ ಉದ್ಯೋಗ ದೊರಕಿಸಿಕೊಡುವೆ. ಈ ಸಂಬಂಧ ಮುಖ್ಯಮಂತ್ರಿ, ಸ್ವೀಕರ್ ಅವರ ಜೊತೆ ಮಾತುಕತೆ ನಡೆಸುವೆ. ಅವರ ತಾಯಿಗೂ ಕೆಲಸ ಮತ್ತು ಪಿಂಚಣಿ ಕೊಡಿಸಲಾಗುವುದು. ಈಗ ಬಾಬು ಅವರ ಸಹೋದರನೇ ಆ ಕುಟುಂಬಕ್ಕೆ ಆಧಾರ. ಅವರಿಗೂ ಕೆಲಸ ಕೊಡಿಸುವೆ. ಸರ್ಕಾರದಿಂದ ಈ ಕುಟುಂಬಕ್ಕೆ ಯಾವ ಸೌಲಭ್ಯಗಳು ದೊರಕಲಿವೆಯೇ ಆ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವೆ ಎಂದು ಭರವಸೆ ನೀಡಿದರು.</p>.<p>ಬಿಜೆಪಿಯವರು ಗೌರಿಬಿದನೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಆದರೆ ಸೌಜನ್ಯಕ್ಕೂ ಬಂದು ಈ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ. ಅಯೋಗ್ಯ ಬಿಜೆಪಿಯವರಿಗೆ ಸಾಮಾನ್ಯ ಜ್ಞಾನವಿದೆಯಾ? ಬರಿ ಪ್ರಕರಣದಿಂದ ಸುಧಾಕರ್ ಹೆಸರು ಕೈಬಿಡಿ ಎನ್ನುತ್ತಿದ್ದಾರೆ. ಆದರೆ ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.</p>.<p>ದಲಿತರ ಸಾವಿಗೆ ಗೌರವವಿಲ್ಲವೇ. ಮೇಲ್ವರ್ಗದವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೀಗೆ ಸತ್ತಿದ್ದರೆ ನಗರಕ್ಕೆ ಬೆಂಕಿ ಇಡುತ್ತಿದ್ದರು. ದಲಿತರ ಪಾಡೇ ಇಷ್ಟೇ. ದಲಿತರು ಸಾವಿರಾರು ವರ್ಷದಿಂದ ಶೋಷಣೆಗೆ ಒಳಗಾಗಿದ್ದಾರೆ. ಡೆತ್ನೋಟ್ನಲ್ಲಿ ಏನು ಬರೆದಿದ್ದಾರೆಯೊ ಆ ರೀತಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ನಾನು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.</p>.<p>ಬಾಬು ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ₹ 13 ಲಕ್ಷ ವಿಮೆ ಹಣ ಬಂದಿತ್ತು. ಅದರ ಜೊತೆಗೆ ಮತ್ತಷ್ಟು ಹಣ ಸೇರಿಸಿ ಚಾಲಕನ ಕೆಲಸ ಕೊಡಿಸಲು ನೀಡಿದ್ದಾಗಿ ಅವರ ತಾಯಿ ಹೇಳಿದರು ಎಂದರು. </p>.<p> <strong>‘ಪವರ್ ಬಳಸಿದ್ದರೆ ಅಣಕನೂರಿನಲ್ಲಿ ಇರುತ್ತಿದ್ದರು’</strong></p><p> ‘ನಾನು ಶಾಸಕ ಸ್ಥಾನವನ್ನು ಜವಾಬ್ದಾರಿ ಎಂದುಕೊಂಡಿದ್ದೇನೆ. ಪವರ್ ಎಂದಿಕೊಂಡಿದ್ದರೆ ನೀವು (ಡಾ.ಕೆ.ಸುಧಾಕರ್) ಅಣಕನೂರಿನಲ್ಲಿ (ಜಿಲ್ಲಾ ಕಾರಾಗೃಹ) ಇರುತ್ತಿದ್ದಿರಿ. ಸಾವಿನಲ್ಲಿ ರಾಜಕೀಯ ಮಾಡುವುದಿಲ್ಲ. ಆದರೆ ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡುತ್ತೇವೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>