ಬಾಗೇಪಲ್ಲಿ ನಿವಾಸಿ, ಟಿ.ವಿ 4 ಚಾನೆಲ್ ವರದಿಗಾರನೆಂದು ಹೇಳಿಕೊಳ್ಳುತ್ತಿದ್ದ ನರೇಂದ್ರ ಅವರು ಬಂಧಿತ ಆರೋಪಿ. ಅವರ ವಿರುದ್ಧ ಪೊಲೀಸರು ಐಪಿಸಿಯ 143 (ಗುಂಪು ಕೂಡುವುದು) 147 (ದೊಂಬಿ), 148 (ಶಸ್ತ್ರಾಸ್ತ್ರ ಬಳಸಿ ದಂಗೆ), 332 (ಸರ್ಕಾರಿ ನೌಕರನ ಮೇಲೆ ಹಲ್ಲೆ), 353 (ಕರ್ತವ್ಯಕ್ಕೆ ಅಡ್ಡಿ) ಮತ್ತು 436 (ಬೆಂಕಿ ಹಚ್ಚುವುದು) ಆರೋಪಗಳ ಅಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.