ಚಿಕ್ಕಬಳ್ಳಾಪುರ: ನಂದಿ ಗಿರಿಧಾಮದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ)ದಿಂದ ಮಾತ್ರ ಹೋಟೆಲ್ ಮತ್ತು ರೆಸ್ಟೋರೆಂಟ್ ಇದೆ. ಮಧ್ಯಮ ವರ್ಗದ ಪ್ರವಾಸಿಗರಿಗೆ ಇಲ್ಲಿನ ತಿಂಡಿಗಳ ಬೆಲೆಗಳು ಕೈಗೆ ಎಟಕುವುದಿಲ್ಲ. ದರ ದುಬಾರಿಯಾಗಿದೆ. ಆದ್ದರಿಂದ ತೋಟಗಾರಿಕಾ ಇಲಾಖೆಯಿಂದ ಪ್ರವಾಸಿಗರಿಗೆ ಅನುಕೂಲವಾಗುವಂತೆ ಕೈಗೆಟಕುವ ದರದಲ್ಲಿ ಕಾಫಿ, ಟೀ, ಊಟ ಸೇರಿದಂತೆ ಆಹಾರಗಳು ದೊರೆಯುವಂತೆ ಮಾಡಬೇಕು. ಅದಕ್ಕಾಗಿ ಗಿರಿಧಾಮದಲ್ಲಿ ಹೋಟೆಲ್ ಆರಂಭಿಸಿ ಎಂದು ಪ್ರವಾಸಿಗರಾದ ಲಲಿತಾ ವಾಣಿ ಎಂಬುವವರು ನಂದಿಗಿರಿಧಾಮದ ವಿಶೇಷಾಧಿಕಾರಿಗೆ ಲಿಖಿತವಾಗಿ ಮನವಿ ಮಾಡಿದ್ದಾರೆ.