<p><strong>ಚಿಕ್ಕಬಳ್ಳಾಪುರ</strong>: ‘ಮೆಟ್ಟಿಲುಗಳನ್ನು ಹತ್ತಿ ಹತ್ತಿ ನೆತ್ತಿಗೆ ಬಂದೆವು. ನಂದಿಯು ರಮಣೀಯವೂ ಶಾಂತವೂ ಆದ ಸ್ಥಳ. ಅಮೃತಸರೋವರವು ಆದರ್ಶವಾಗಿದೆ. ಕಿನ್ನರ ಪ್ರಪಂಚದಲ್ಲಿ ಇದ್ದಂತೆ. ಸುತ್ತಲೂ ಅನೇಕ ನೂರು ಮೈಲಿಗಳ ವಿಸ್ತಾರವಾದ ಬಯಲುಸೀಮೆಯ ದೃಶ್ಯ. ಇದೊಂದು ಮಾತ್ರ ಮಲೆನಾಡಿನ ಒಂದು ದ್ವೀಪದಂತೆ! ಅಲ್ಲಲ್ಲಿ ಗುಡ್ಡಗಳು ಬೆಳ್ಳಗೆ ಕೆಂಪಗೆ ಹೊಳೆಯುವ ಕೆರೆಗಳು. ಮಂಜು ಕವಿದು ಸುತ್ತಲೂ ಲೋಕವೂ ನಾಕವೂ ಭೂಮಿಯೂ ಆಕಾಶವೂ ಒಂದು ಹಾಲ್ಗಡಲಂತೆ ತೋರಿತು’</p><p>ನಂದಿಬೆಟ್ಟದ ಕುರಿತು ರಾಷ್ಟ್ರಕವಿ ಕುವೆಂಪು ಅವರು ತಮ್ಮ ಆತ್ಮಕತೆ ‘ನೆನಪಿನ ದೋಣಿಯಲ್ಲಿ’ಯಲ್ಲಿ ದಾಖಲಿಸಿರುವ ಮಾತುಗಳಿವು. ಕುವೆಂಪು ಅವರು 1932ರಲ್ಲಿ ರಾಜ್ಯದ ಪ್ರಸಿದ್ಧಗಿರಿಧಾಮಗಳಲ್ಲಿ ಒಂದು ಎನಿಸಿರುವ ‘ನಂದಿ’ಗೆ ಭೇಟಿ ನೀಡಿದ್ದರು.</p><p>ಬಯಲುಸೀಮೆಯ ಊಟಿ ಎಂದೇ ಜನಪ್ರಿಯವಾಗಿರುವ ನಂದಿಗಿರಿಧಾಮಕ್ಕೆ ಬೇಸಿಗೆಯ ಬಿಸಿಲು ಹೆಚ್ಚಿದಂತೆ ಪ್ರವಾಸಿಗರು ಸಹ ಹೆಚ್ಚುವರು. ಗಿರಿಧಾಮದ ತಣ್ಣನೆಯ ಆಹ್ಲಾದಕ್ಕೆ ಮೈಯೊಡ್ಡುವರು. ನೆತ್ತಿ ಸುಡುವ ಬಿಸಿಲಿನ ದಿನಗಳಲ್ಲಿ ‘ನಂದಿ’ಗೆ ಹೋಗಬೇಕು ಎನ್ನುವ ಮನಸ್ಸುಗಳು ಹೆಚ್ಚಿವೆ.</p><p>ಅಂದಹಾಗೆ ಇದು ಇಂದಿನ ಜನರ ಮನಸ್ಥಿತಿಯಲ್ಲ. ಬೇಸಿಗೆಯ ದಿನಗಳಲ್ಲಿ ಬ್ರಿಟಿಷರು, ರಾಜ ಮಹಾರಾಜರು ಸಹ ನಂದಿಬೆಟ್ಟಕ್ಕೆ ಭೇಟಿ ನೀಡುತ್ತಿದ್ದರು. ಟಿಪ್ಪು ಸುಲ್ತಾನ್ ಬೇಸಿಗೆಯ ದಿನಗಳಲ್ಲಿ ಕಾಲ ಕಳೆಯಲು ನಂದಿಗಿರಿಧಾಮದಲ್ಲಿ ಅರಮನೆಯನ್ನೇ ನಿರ್ಮಿಸಿದ್ದರು. ಈಗ ಈ ಅರಮನೆ ಟಿಪ್ಪುವಿನ ಬೇಸಿಗೆ ಅರಮನೆ ಎಂದೇ ಪ್ರಸಿದ್ಧಿ.</p><p>‘ನಂದಿಗಿರಿ’ಯ ಆಹ್ಲಾದಕ್ಕೆ ಬ್ರಿಟಿಷರು ಸಹ ಮನಸೋತಿದ್ದರು. ಬೇಸಿಗೆಯ ದಿನಗಳಲ್ಲಿ ಅದು ಅವರಿಗೆ ‘ಲಿಟ್ಲ ಇಂಗ್ಲೆಂಡ್’ ಎನಿಸಿತ್ತು. 1791 ರಿಂದ 1881ರವರೆಗೆ ನಂದಿಬೆಟ್ಟ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು.ಬೇಸಿಗೆಯ ದಿನಗಳಲ್ಲಿ ಇಲ್ಲಿ ತಂಗಲು ಬಂಗಲೆಗಳನ್ನು ನಿರ್ಮಿಸಿದ್ದರು.</p><p>ಮೊದಲು ನಂದಿಬೆಟ್ಟ ಅಭಿವೃದ್ಧಿಪಡಿಸಿದ ಬ್ರಿಟಿಷರಲ್ಲಿ ಕರ್ನಲ್ ಕುಪ್ಪೇಜ್ (1799-1808) ಪ್ರಮುಖರು. ಕುಪ್ಪೇಜ್ ಯುರೋಪಿನಲ್ಲಿ ಬೆಳೆಯುತ್ತಿದ್ದ ಗಿಡಗಳನ್ನು ತರಿಸಿ ನಂದಿ ಬೆಟ್ಟದ ಮೇಲೆ ನೆಡಿಸಿ ಉದ್ಯಾನ ರೂಪಿಸಿದರು. ಅಮೃತಸರೋವರ ಹಿಂಭಾಗದಲ್ಲಿ ಎರಡೂವರೆ ಶತಮಾನದಷ್ಟು ಹಳೆ ಮರಗಳಿರುವ ಕುಪ್ಪೇಜ್ ಉದ್ಯಾನ ಈಗಲೂ ಇದೆ.</p><p>1834ರಲ್ಲಿ ಮೈಸೂರು ರಾಜ್ಯದ ಬ್ರಿಟಿಷ್ ಕಮೀಷನರ್ ಆಗಿದ್ದ ಮಾರ್ಕ್ ಕಬ್ಬನ್ ಬೇಸಿಗೆಯ ದಿನಗಳಲ್ಲಿ ನಂದಿಬೆಟ್ಟದಲ್ಲಿ ತಂಗುತ್ತಿದ್ದರು. 1848ರಲ್ಲಿ ಅಧಿಕೃತ ನಿವಾಸವಾಗಿ ಅವರು ನಂದಿಬೆಟ್ಟದಲ್ಲಿ ‘ಕಬ್ಬನ್ ಹೌಸ್’ ಸಹ ನಿರ್ಮಿಸಿದರು. ಬೇಸಿಗೆಯ ಎರಡು ಮೂರು ತಿಂಗಳು ನಂದಿ ಬೆಟ್ಟದ ‘ಕಬ್ಬನ್ ಹೌಸ್’ ನಲ್ಲಿದ್ದು ಆಡಳಿತ ನಡೆಸುತ್ತಿದ್ದರು.</p><p>ರಾಜ್ಯವನ್ನು ಎಂಟು ಕಂದಾಯ ವಿಭಾಗಗಳಾಗಿ ಕಬ್ಬನ್ ವಿಭಾಗಿಸಿದ್ದು ಅವುಗಳಲ್ಲಿ ನಂದಿದುರ್ಗ ವಿಭಾಗವೂ ಒಂದಾಗಿತ್ತು. ನಂದಿಬೆಟ್ಟದಲ್ಲಿ ಅತ್ಯಂತ ಎತ್ತರದ ಸ್ಥಳದಲ್ಲಿ ಕಬ್ಬನ್ ಹೌಸ್ ನಿರ್ಮಿಸಲಾಗಿದೆ. ‘ಸರ್ ಮಾರ್ಕ್ ಕಬ್ಬನ್, ಕಮೀಷನರ್ ಆಫ್ ಮೈಸೂರ್ ಅವರ ಬೇಸಿಗೆ ನಿವಾಸ’ ಎನ್ನುವ ಫಲಕ ಕಟ್ಟಡದಲ್ಲಿದೆ.</p><p>ಬೆಂಗಳೂರಿನಲ್ಲಿ ಬ್ರಿಟಿಷ್ ಕಾಲದಲ್ಲಿ ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದ ಜಾನ್ ಗ್ಯಾರೆಟ್, ಅವರ ಪತ್ನಿ ಸೋಫಿಯಾ ಗ್ಯಾರೆಟ್ ಸಹ ಬೇಸಿಗೆಯ ದಿನಗಳಲ್ಲಿ ನಂದಿಗಿರಿಧಾಮದಲ್ಲಿ ತಂಗುತ್ತಿದ್ದರು. ಸೋಫಿಯಾ ಗ್ಯಾರೆಟ್ ನಂದಿದುರ್ಗದಲ್ಲಿಯೇ 1869ರ ಏ.10ರಂದು ನಿಧನರಾದರು.</p><p>ನಂದಿಬೆಟ್ಟ ಬಯಲು ಸೀಮೆಯ ಪ್ರಮುಖ ಜೀವವೈವಿಧ್ಯ ತಾಣ. ಟಿಕೆಲ್ಸ್ ಬ್ಲೂ ಫೈಕ್ಯಾಚರ್, ವೈಟ್ಐ, ಸೂರಕ್ಕಿ. ಮೈನಾಗಳು, ಬುಲ್ಬುಲ್ಗಳು, ಥ್ರಷ್ಗಳು, ಎತ್ತರದಲ್ಲಿ ಹಾರುವ ವಿವಿಧ ಹದ್ದುಗಳು ಇಲ್ಲಿ ಕಾಣಸಿಗುತ್ತವೆ.</p><p>ಹಲವು ದಶಕಗಳ ಹಿಂದೆ ನಂದಿಬೆಟ್ಟವು ಕುವೆಂಪು ಅವರಿಗೆ ಮಲೆನಾಡಿನ ತುಣುಕಿನಂತೆ ಕಂಡಿತ್ತು. ಇಂದಿಗೂ ಸಹ ತನ್ನ ಮೇಲಿನ ಮಾನವ ನಿರ್ಮಿತ ದಾಳಿಗಳು, ಲೇಔಟ್ಗಳು, ಜಲಮೂಲಗಳ ಹರಿವಿಗೆ ಕತ್ತರಿಯ ನಡುವೆಯೂ ಬಿಸಿಲಿನಲ್ಲಿ ಬೆಂದು ಬಂದವರಿಗೆ ತಣ್ಣನೆಯ ಹಿತದ ಅನುಭವ ನೀಡುತ್ತದೆ.</p><p>ಆ ಕಾರಣದಿಂದಲೇ ಬೇಸಿಗೆಯ ದಿನಗಳಲ್ಲಿ ಪ್ರವಾಸಿಗರು ‘ನಂದಿ’ಯನ್ನು ಹುಡುಕಿ ಬರುವರು.</p><p>***</p>.<p><strong>ಮಹಾತ್ಮರೂ ತಂಗಿದ್ದು ಬೇಸಿಗೆಯಲ್ಲಿಯೇ</strong></p><p>ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಸತ್ಯಾಗ್ರಹ, ಉಪವಾಸ, ಕಾಲ್ನಡಿಗೆಯ ಕಾರಣದಿಂದ ಬಳಲಿದ್ದ ಮಹಾತ್ಮ ಗಾಂಧೀಜಿ ಅವರಿಗೆ ರಕ್ತದ ಒತ್ತಡ ಹೆಚ್ಚಾಗಿ ಆರೋಗ್ಯ ಕೆಟ್ಟಿತ್ತು. ವೈದ್ಯರ ಸಲಹೆ ಪ್ರಕಾರ ವಿಶ್ರಾಂತಿಗಾಗಿ 1927ರ ಏ.19 ರಂದು ನಂದಿಬೆಟ್ಟಕ್ಕೆ ಗಾಂಧೀಜಿ ಬಂದರು.ಹೀಗೆ ಬೇಸಿಗೆಯ ದಿನಗಳಲ್ಲಿ ಬಳಲಿದ್ದ ಮಹಾತ್ಮರಿಗೆ ಇಲ್ಲಿನ ತಣ್ಣನೆಯ ಹವಾಗುಣ ಆರೋಗ್ಯವನ್ನು ಉತ್ತಮಗೊಳಿಸಿತ್ತು.</p><p>ಗಾಂಧೀಜಿ ಅವರು ನಂದಿಬೆಟ್ಟದಲ್ಲಿ 45 ದಿನಗಳ ಕಾಲ ರಮಣೀಯ ದೃಶ್ಯಗಳು ಕಾಣಸಿಗುವ ಕನಿಂಗ್ಹ್ಯಾಂ ನಿರ್ಮಿಸಿದ್ದ ‘ಓಕ್ಲ್ಯಾಂಡ್ಸ್’ ಭವನದಲ್ಲಿ ಜೂನ್ 5 ರವರೆಗೆ ತಂಗಿದ್ದರು. ಇದು ಗಾಂಧೀಜಿ ಅವರು ಗಿರಿಧಾಮಕ್ಕೆ ನೀಡಿದ ಮೊದಲ ಭೇಟಿ.</p>.ಬೇಸಿಗೆ ಬಂದರೂ ಆರಂಭ ಆಗದ ಕೊಳವೆ ಬಾವಿ ದುರಸ್ತಿ: ಜಲಮಂಡಳಿ ವಿಳಂಬ ನೀತಿಗೆ ಅಸಮಾಧಾನ.ಬ್ರಹ್ಮಾವರ: ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಿತೇ ವಾರಾಹಿ ನೀರು ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ‘ಮೆಟ್ಟಿಲುಗಳನ್ನು ಹತ್ತಿ ಹತ್ತಿ ನೆತ್ತಿಗೆ ಬಂದೆವು. ನಂದಿಯು ರಮಣೀಯವೂ ಶಾಂತವೂ ಆದ ಸ್ಥಳ. ಅಮೃತಸರೋವರವು ಆದರ್ಶವಾಗಿದೆ. ಕಿನ್ನರ ಪ್ರಪಂಚದಲ್ಲಿ ಇದ್ದಂತೆ. ಸುತ್ತಲೂ ಅನೇಕ ನೂರು ಮೈಲಿಗಳ ವಿಸ್ತಾರವಾದ ಬಯಲುಸೀಮೆಯ ದೃಶ್ಯ. ಇದೊಂದು ಮಾತ್ರ ಮಲೆನಾಡಿನ ಒಂದು ದ್ವೀಪದಂತೆ! ಅಲ್ಲಲ್ಲಿ ಗುಡ್ಡಗಳು ಬೆಳ್ಳಗೆ ಕೆಂಪಗೆ ಹೊಳೆಯುವ ಕೆರೆಗಳು. ಮಂಜು ಕವಿದು ಸುತ್ತಲೂ ಲೋಕವೂ ನಾಕವೂ ಭೂಮಿಯೂ ಆಕಾಶವೂ ಒಂದು ಹಾಲ್ಗಡಲಂತೆ ತೋರಿತು’</p><p>ನಂದಿಬೆಟ್ಟದ ಕುರಿತು ರಾಷ್ಟ್ರಕವಿ ಕುವೆಂಪು ಅವರು ತಮ್ಮ ಆತ್ಮಕತೆ ‘ನೆನಪಿನ ದೋಣಿಯಲ್ಲಿ’ಯಲ್ಲಿ ದಾಖಲಿಸಿರುವ ಮಾತುಗಳಿವು. ಕುವೆಂಪು ಅವರು 1932ರಲ್ಲಿ ರಾಜ್ಯದ ಪ್ರಸಿದ್ಧಗಿರಿಧಾಮಗಳಲ್ಲಿ ಒಂದು ಎನಿಸಿರುವ ‘ನಂದಿ’ಗೆ ಭೇಟಿ ನೀಡಿದ್ದರು.</p><p>ಬಯಲುಸೀಮೆಯ ಊಟಿ ಎಂದೇ ಜನಪ್ರಿಯವಾಗಿರುವ ನಂದಿಗಿರಿಧಾಮಕ್ಕೆ ಬೇಸಿಗೆಯ ಬಿಸಿಲು ಹೆಚ್ಚಿದಂತೆ ಪ್ರವಾಸಿಗರು ಸಹ ಹೆಚ್ಚುವರು. ಗಿರಿಧಾಮದ ತಣ್ಣನೆಯ ಆಹ್ಲಾದಕ್ಕೆ ಮೈಯೊಡ್ಡುವರು. ನೆತ್ತಿ ಸುಡುವ ಬಿಸಿಲಿನ ದಿನಗಳಲ್ಲಿ ‘ನಂದಿ’ಗೆ ಹೋಗಬೇಕು ಎನ್ನುವ ಮನಸ್ಸುಗಳು ಹೆಚ್ಚಿವೆ.</p><p>ಅಂದಹಾಗೆ ಇದು ಇಂದಿನ ಜನರ ಮನಸ್ಥಿತಿಯಲ್ಲ. ಬೇಸಿಗೆಯ ದಿನಗಳಲ್ಲಿ ಬ್ರಿಟಿಷರು, ರಾಜ ಮಹಾರಾಜರು ಸಹ ನಂದಿಬೆಟ್ಟಕ್ಕೆ ಭೇಟಿ ನೀಡುತ್ತಿದ್ದರು. ಟಿಪ್ಪು ಸುಲ್ತಾನ್ ಬೇಸಿಗೆಯ ದಿನಗಳಲ್ಲಿ ಕಾಲ ಕಳೆಯಲು ನಂದಿಗಿರಿಧಾಮದಲ್ಲಿ ಅರಮನೆಯನ್ನೇ ನಿರ್ಮಿಸಿದ್ದರು. ಈಗ ಈ ಅರಮನೆ ಟಿಪ್ಪುವಿನ ಬೇಸಿಗೆ ಅರಮನೆ ಎಂದೇ ಪ್ರಸಿದ್ಧಿ.</p><p>‘ನಂದಿಗಿರಿ’ಯ ಆಹ್ಲಾದಕ್ಕೆ ಬ್ರಿಟಿಷರು ಸಹ ಮನಸೋತಿದ್ದರು. ಬೇಸಿಗೆಯ ದಿನಗಳಲ್ಲಿ ಅದು ಅವರಿಗೆ ‘ಲಿಟ್ಲ ಇಂಗ್ಲೆಂಡ್’ ಎನಿಸಿತ್ತು. 1791 ರಿಂದ 1881ರವರೆಗೆ ನಂದಿಬೆಟ್ಟ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು.ಬೇಸಿಗೆಯ ದಿನಗಳಲ್ಲಿ ಇಲ್ಲಿ ತಂಗಲು ಬಂಗಲೆಗಳನ್ನು ನಿರ್ಮಿಸಿದ್ದರು.</p><p>ಮೊದಲು ನಂದಿಬೆಟ್ಟ ಅಭಿವೃದ್ಧಿಪಡಿಸಿದ ಬ್ರಿಟಿಷರಲ್ಲಿ ಕರ್ನಲ್ ಕುಪ್ಪೇಜ್ (1799-1808) ಪ್ರಮುಖರು. ಕುಪ್ಪೇಜ್ ಯುರೋಪಿನಲ್ಲಿ ಬೆಳೆಯುತ್ತಿದ್ದ ಗಿಡಗಳನ್ನು ತರಿಸಿ ನಂದಿ ಬೆಟ್ಟದ ಮೇಲೆ ನೆಡಿಸಿ ಉದ್ಯಾನ ರೂಪಿಸಿದರು. ಅಮೃತಸರೋವರ ಹಿಂಭಾಗದಲ್ಲಿ ಎರಡೂವರೆ ಶತಮಾನದಷ್ಟು ಹಳೆ ಮರಗಳಿರುವ ಕುಪ್ಪೇಜ್ ಉದ್ಯಾನ ಈಗಲೂ ಇದೆ.</p><p>1834ರಲ್ಲಿ ಮೈಸೂರು ರಾಜ್ಯದ ಬ್ರಿಟಿಷ್ ಕಮೀಷನರ್ ಆಗಿದ್ದ ಮಾರ್ಕ್ ಕಬ್ಬನ್ ಬೇಸಿಗೆಯ ದಿನಗಳಲ್ಲಿ ನಂದಿಬೆಟ್ಟದಲ್ಲಿ ತಂಗುತ್ತಿದ್ದರು. 1848ರಲ್ಲಿ ಅಧಿಕೃತ ನಿವಾಸವಾಗಿ ಅವರು ನಂದಿಬೆಟ್ಟದಲ್ಲಿ ‘ಕಬ್ಬನ್ ಹೌಸ್’ ಸಹ ನಿರ್ಮಿಸಿದರು. ಬೇಸಿಗೆಯ ಎರಡು ಮೂರು ತಿಂಗಳು ನಂದಿ ಬೆಟ್ಟದ ‘ಕಬ್ಬನ್ ಹೌಸ್’ ನಲ್ಲಿದ್ದು ಆಡಳಿತ ನಡೆಸುತ್ತಿದ್ದರು.</p><p>ರಾಜ್ಯವನ್ನು ಎಂಟು ಕಂದಾಯ ವಿಭಾಗಗಳಾಗಿ ಕಬ್ಬನ್ ವಿಭಾಗಿಸಿದ್ದು ಅವುಗಳಲ್ಲಿ ನಂದಿದುರ್ಗ ವಿಭಾಗವೂ ಒಂದಾಗಿತ್ತು. ನಂದಿಬೆಟ್ಟದಲ್ಲಿ ಅತ್ಯಂತ ಎತ್ತರದ ಸ್ಥಳದಲ್ಲಿ ಕಬ್ಬನ್ ಹೌಸ್ ನಿರ್ಮಿಸಲಾಗಿದೆ. ‘ಸರ್ ಮಾರ್ಕ್ ಕಬ್ಬನ್, ಕಮೀಷನರ್ ಆಫ್ ಮೈಸೂರ್ ಅವರ ಬೇಸಿಗೆ ನಿವಾಸ’ ಎನ್ನುವ ಫಲಕ ಕಟ್ಟಡದಲ್ಲಿದೆ.</p><p>ಬೆಂಗಳೂರಿನಲ್ಲಿ ಬ್ರಿಟಿಷ್ ಕಾಲದಲ್ಲಿ ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದ ಜಾನ್ ಗ್ಯಾರೆಟ್, ಅವರ ಪತ್ನಿ ಸೋಫಿಯಾ ಗ್ಯಾರೆಟ್ ಸಹ ಬೇಸಿಗೆಯ ದಿನಗಳಲ್ಲಿ ನಂದಿಗಿರಿಧಾಮದಲ್ಲಿ ತಂಗುತ್ತಿದ್ದರು. ಸೋಫಿಯಾ ಗ್ಯಾರೆಟ್ ನಂದಿದುರ್ಗದಲ್ಲಿಯೇ 1869ರ ಏ.10ರಂದು ನಿಧನರಾದರು.</p><p>ನಂದಿಬೆಟ್ಟ ಬಯಲು ಸೀಮೆಯ ಪ್ರಮುಖ ಜೀವವೈವಿಧ್ಯ ತಾಣ. ಟಿಕೆಲ್ಸ್ ಬ್ಲೂ ಫೈಕ್ಯಾಚರ್, ವೈಟ್ಐ, ಸೂರಕ್ಕಿ. ಮೈನಾಗಳು, ಬುಲ್ಬುಲ್ಗಳು, ಥ್ರಷ್ಗಳು, ಎತ್ತರದಲ್ಲಿ ಹಾರುವ ವಿವಿಧ ಹದ್ದುಗಳು ಇಲ್ಲಿ ಕಾಣಸಿಗುತ್ತವೆ.</p><p>ಹಲವು ದಶಕಗಳ ಹಿಂದೆ ನಂದಿಬೆಟ್ಟವು ಕುವೆಂಪು ಅವರಿಗೆ ಮಲೆನಾಡಿನ ತುಣುಕಿನಂತೆ ಕಂಡಿತ್ತು. ಇಂದಿಗೂ ಸಹ ತನ್ನ ಮೇಲಿನ ಮಾನವ ನಿರ್ಮಿತ ದಾಳಿಗಳು, ಲೇಔಟ್ಗಳು, ಜಲಮೂಲಗಳ ಹರಿವಿಗೆ ಕತ್ತರಿಯ ನಡುವೆಯೂ ಬಿಸಿಲಿನಲ್ಲಿ ಬೆಂದು ಬಂದವರಿಗೆ ತಣ್ಣನೆಯ ಹಿತದ ಅನುಭವ ನೀಡುತ್ತದೆ.</p><p>ಆ ಕಾರಣದಿಂದಲೇ ಬೇಸಿಗೆಯ ದಿನಗಳಲ್ಲಿ ಪ್ರವಾಸಿಗರು ‘ನಂದಿ’ಯನ್ನು ಹುಡುಕಿ ಬರುವರು.</p><p>***</p>.<p><strong>ಮಹಾತ್ಮರೂ ತಂಗಿದ್ದು ಬೇಸಿಗೆಯಲ್ಲಿಯೇ</strong></p><p>ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಸತ್ಯಾಗ್ರಹ, ಉಪವಾಸ, ಕಾಲ್ನಡಿಗೆಯ ಕಾರಣದಿಂದ ಬಳಲಿದ್ದ ಮಹಾತ್ಮ ಗಾಂಧೀಜಿ ಅವರಿಗೆ ರಕ್ತದ ಒತ್ತಡ ಹೆಚ್ಚಾಗಿ ಆರೋಗ್ಯ ಕೆಟ್ಟಿತ್ತು. ವೈದ್ಯರ ಸಲಹೆ ಪ್ರಕಾರ ವಿಶ್ರಾಂತಿಗಾಗಿ 1927ರ ಏ.19 ರಂದು ನಂದಿಬೆಟ್ಟಕ್ಕೆ ಗಾಂಧೀಜಿ ಬಂದರು.ಹೀಗೆ ಬೇಸಿಗೆಯ ದಿನಗಳಲ್ಲಿ ಬಳಲಿದ್ದ ಮಹಾತ್ಮರಿಗೆ ಇಲ್ಲಿನ ತಣ್ಣನೆಯ ಹವಾಗುಣ ಆರೋಗ್ಯವನ್ನು ಉತ್ತಮಗೊಳಿಸಿತ್ತು.</p><p>ಗಾಂಧೀಜಿ ಅವರು ನಂದಿಬೆಟ್ಟದಲ್ಲಿ 45 ದಿನಗಳ ಕಾಲ ರಮಣೀಯ ದೃಶ್ಯಗಳು ಕಾಣಸಿಗುವ ಕನಿಂಗ್ಹ್ಯಾಂ ನಿರ್ಮಿಸಿದ್ದ ‘ಓಕ್ಲ್ಯಾಂಡ್ಸ್’ ಭವನದಲ್ಲಿ ಜೂನ್ 5 ರವರೆಗೆ ತಂಗಿದ್ದರು. ಇದು ಗಾಂಧೀಜಿ ಅವರು ಗಿರಿಧಾಮಕ್ಕೆ ನೀಡಿದ ಮೊದಲ ಭೇಟಿ.</p>.ಬೇಸಿಗೆ ಬಂದರೂ ಆರಂಭ ಆಗದ ಕೊಳವೆ ಬಾವಿ ದುರಸ್ತಿ: ಜಲಮಂಡಳಿ ವಿಳಂಬ ನೀತಿಗೆ ಅಸಮಾಧಾನ.ಬ್ರಹ್ಮಾವರ: ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಿತೇ ವಾರಾಹಿ ನೀರು ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>