ನಗರದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಪರ ನಡೆದ ರೋಡ್ ಶೋದಲ್ಲಿ ಮಾತನಾಡಿದ ಅವರು, ‘ಬಹಳಷ್ಟು ಜನ ತಮ್ಮ ಸ್ವಾರ್ಥದಿಂದಾಗಿ ತಿಹಾರ್ ಜೈಲಿನಲ್ಲಿ ರಾಜ್ಯದ ಇತಿಹಾಸ ಬರೆಯಲು ಹೋದರು. ನಿಮಗೆ ಜೈಲಿನಲ್ಲಿ ಕರ್ನಾಟಕದ ಇತಿಹಾಸ ಬರೆಯುವ ಜನ ಬೇಕಾ? ಚಿಕ್ಕಬಳ್ಳಾಪುರದ ಅಭಿವೃದ್ಧಿ ಮಾಡುವ ಜನ ಬೇಕಾ?’ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಲೇವಡಿ ಮಾಡಿದರು.