ಸಾಯಿಶೂರ್ ಪೌಷ್ಟಿಕ ಹಾಲಿನ ಪೌಡರ್ ಅನ್ನು ಅಗತ್ಯವುಳ್ಳ ಎಲ್ಲ ಮಕ್ಕಳಿಗೂ ಸೂಕ್ತ ರೀತಿಯಲ್ಲಿ ವಿತರಿಸಬೇಕು. ಎಷ್ಟು, ಯಾವ ಮಕ್ಕಳಿಗೆ ಯಾವ ಪ್ರಮಾಣದಲ್ಲಿ ಪೌಡರ್ ನೀಡಲಾಗುತ್ತಿದೆ. ಬೇಡಿಕೆ ಎಷ್ಟು, ವಿತರಣೆ ಎಷ್ಟು ಎಂಬುದರ ಕುರಿತ ವರದಿಯನ್ನು ಕಚೇರಿಗೆ ಸಲ್ಲಿಸಬೇಕು. ಶಾಲೆಗಳು ಆರಂಭವಾಗುವುದರಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಎಲ್ಲ ಮಕ್ಕಳಿಗೂ ಪ್ರಸ್ತುತ ಜಾರಿ ಇರುವಂತೆ ಮನೆಗಳಿಗೆ ಆಹಾರ ಧಾನ್ಯ ವಿತರಣೆಯಾಗಬೇಕು ಎಂದು ಅಕ್ಷರ ದಾಸೋಹದ ಜಿಲ್ಲಾ ಅಧಿಕಾರಿಗೆ ಸೂಚಿಸಿದರು.