ಬೇಸಿಗೆ ಪರಿಸ್ಥಿತಿಯಲ್ಲಿ ಸಿಹಿನೀರು 10-15 ದಿನಗಳಿಗೊಮ್ಮೆ ಬಿಡಲಾಗುತ್ತಿದೆ. ಉಪ್ಪುನೀರು ಕೆಲವು ಮನೆಗಳಿಗೆ 8 ದಿನಗಳಿಗೊಮ್ಮೆ ಬಂದರೆ, ಕೆಲವು ಮನೆಗಳಿಗೆ 15 ದಿನಗಳಿಗೆ ಬರುತ್ತಿದೆ. ಕಾರಣವೇನೆಂದರೆ ನಮ್ಮ ವಾರ್ಡ್ ನ ಕೊಳವೆ ಬಾವಿಯ ನೀರನ್ನು ಮೂರು ವಾರ್ಡ್ ಗಳಿಗೆ ಹಂಚಲಾಗುತ್ತದೆ. ಕೊಳವೆ ಬಾವಿಯೊಂದನ್ನು ಕೊರೆಸಲು ಸ್ಥಳವನ್ನು ಗುರುತಿಸಿದ್ದು, ಶಾಸಕರಿಗೆ ಮನವಿಯನ್ನು ಮಾಡಿದ್ದೇನೆ. ಅಕಸ್ಮಾತ್ ಬೇಸಿಗೆಯ ತೀವ್ರತೆ ಜಾಸ್ತಿಯಾಗಿ, ನೀರಿನ ಅಭಾವ ಹೆಚ್ಚಾದರೆ ಟ್ಯಾಂಕರ್ ಮೂಲಕ ಜನರಿಗೆ ನೀರು ತಂದು ಕೊಡಲು ಚಿಂತನೆ ನಡೆಸಿದ್ದೇವೆ ಎಂದು ಅವರು ವಿವರಿಸಿದರು.