<p><strong>ಚಿಕ್ಕಬಳ್ಳಾಪುರ</strong>: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 38 ಸಾವಿರ ಕುಟುಂಬಗಳಿಗೆ ನಿವೇಶನವಿಲ್ಲ. ಈ ಕುಟುಂಬಗಳು ನಿವೇಶನಕ್ಕೆ ಎದುರು ನೋಡುತ್ತಿವೆ. ಜಿಲ್ಲಾಡಳಿತವು ನಿವೇಶನ ರಹಿತರ ಸಮೀಕ್ಷೆ ನಡೆಸಿತ್ತು. </p>.<p>ಸ್ವಂತ ಸೂರಿನ ಆಸರೆಗಾಗಿ ಕುಟುಂಬಗಳು ಎದುರು ನೋಡುತ್ತಿವೆ. ಸರ್ಕಾರದ ವಿವಿಧ ಆಶ್ರಯ ಯೋಜನೆಗಳ ಅಡಿಯಲ್ಲಿ ನಿವೇಶನ ಮಂಜೂರಾಗುತ್ತದೆ ಎನ್ನುವ ನಿರೀಕ್ಷೆ ಹೊಂದಿದ್ದಾರೆ. ಕೆಲವರು ನಿವೇಶನಗಳಿಗಾಗಿ ಪಂಚಾಯಿತಿಗಳಲ್ಲಿ ನಡೆಯುವ ಗ್ರಾಮ ಸಭೆಗಳತ್ತ ಎದುರು ನೋಡುತ್ತಿದ್ದಾರೆ. </p>.<p>ನಿವೇಶನ ರಹಿತ ಕುಟುಂಬದ ಸಮೀಕ್ಷಾ ವರದಿಯ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 38,076 ಕುಟುಂಬಗಳು ನಿವೇಶನಕ್ಕೆ ಎದುರು ನೋಡುತ್ತಿವೆ. ಈ ಪೈಕಿ ಗರಿಷ್ಠ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯ ಜನರೇ ಇದ್ದಾರೆ. </p>.<p>ಜಿಲ್ಲೆಯ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಚೇಳೂರು, ಮಂಚೇನಹಳ್ಳಿ ತಾಲ್ಲೂಕಿನಲ್ಲಿ ಬಹುಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯ ಜನರು ಇದ್ದಾರೆ. ಗೌರಿಬಿದನೂರು, ಗುಡಿಬಂಡೆ ಭಾಗದಲ್ಲಿ ಪಂಗಡದ ಜನಸಂಖ್ಯೆ ಹೆಚ್ಚಿದೆ. ಸಮೀಕ್ಷಾ ವರದಿಯ ಪ್ರಕಾರ ಪರಿಶಿಷ್ಟ ಜಾತಿಯ 15,153 ಕುಟುಂಬಗಳು, ಪಂಗಡದ 6,453 ಮತ್ತು ಸಾಮಾನ್ಯ ವರ್ಗದ 13,897, ಅಲ್ಪಸಂಖ್ಯಾತ ಸಮುದಾಯದ 2,573 ಕುಟುಂಬಗಳು ನಿವೇಶನರಹಿತರು ಎನ್ನುವ ಹಣೆಪಟ್ಟಿ ಹೊತ್ತಿವೆ.</p>.<p>ಸಚಿವ ಡಾ.ಎಂ.ಸಿ.ಸುಧಾಕರ್ ಪ್ರತಿನಿಧಿಸುವ ಚಿಂತಾಮಣಿ ತಾಲ್ಲೂಕಿನಲ್ಲಿ 2,470 ನಿವೇಶನ ರಹಿತ ಕುಟುಂಬಗಳಿವೆ. ಇದು ಜಿಲ್ಲೆಯಲ್ಲಿಯೇ ಕನಿಷ್ಠ ಮಟ್ಟದಲ್ಲಿ ನಿವೇಶನ ರಹಿತರನ್ನು ಹೊಂದಿರುವ ತಾಲ್ಲೂಕು ಎನಿಸಿದೆ.</p>.<p>ಡಾ.ಕೆ. ಸುಧಾಕರ್ ಪ್ರಯತ್ನ; ಜಮೀನಿಗಿಲ್ಲ ಸಮಸ್ಯೆ: ಜಿಲ್ಲೆಯಲ್ಲಿ ಎಲ್ಲ ತಾಲ್ಲೂಕುಗಳಲ್ಲಿಯೂ ನಿವೇಶನಕ್ಕೆ ಜಮೀನು ಅಗತ್ಯವಿದೆ. ಆದರೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಈಗಾಗಲೇ 286.33 ಎಕರೆ ಜಮೀನು ವಾಸಕ್ಕೆ ಯೋಗ್ಯವಿದೆ. ಈ ಜಮೀನಿನಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು.</p>.<p>ಡಾ.ಕೆ.ಸುಧಾಕರ್ ಸಚಿವರಾಗಿದ್ದ ವೇಳೆ ಬಡವರಿಗೆ ನಿವೇಶನ ನೀಡಬೇಕು ಎಂದು ಜಮೀನು ಮಂಜೂರು ಮಾಡಿಸಿದ್ದರು. ಅಂದಿನ ಕಂದಾಯ ಸಚಿವ ಆರ್.ಅಶೋಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮಗಳನ್ನು ಈ ವಿಚಾರವನ್ನು ಒತ್ತಿ ಹೇಳಿದ್ದರು.</p>.<p>ಜಮೀನುಗಳನ್ನು ಗುರುತಿಸಿ ಅಲ್ಲಿ ಬಡಾವಣೆಗಳನ್ನು ನಿರ್ಮಿಸಬೇಕಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿನ ಅವರ ಸೋಲು ಈ ನಿವೇಶನದ ವಿಚಾರವು ರಾಜಕಾರಣಕ್ಕೆ ಜಾರಿತು. ಆದರೆ ಇಂದಿಗೂ ಗುರುತಿಸಿರುವ ಸ್ಥಳಗಳಲ್ಲಿ ಬಡಾವಣೆಗಳ ನಿರ್ಮಾಣ ಸಾಧ್ಯವಾಗಿಲ್ಲ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ಮಂಚೇನಹಳ್ಳಿ ತಾಲ್ಲೂಕಿಗೆ 104 ಎಕರೆ ಜಮೀನು ನಿವೇಶಗಳಿಗಾಗಿ ಅಗತ್ಯವಿದೆ.</p>.<p>ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ದಲಿತ ಸಂಘರ್ಷ ಸಮಿತಿ ದಲಿತರಿಗೆ ಸೂರು ಕಲ್ಪಿಸಬೇಕು ಎಂದು ಹೋರಾಟಗಳನ್ನು ನಡೆಸುತ್ತಿದೆ. ಆದರೆ ಈ ಸೂರಿನ ಆಸರೆ ಇಂದಿಗೂ ಈಡೇರಿಲ್ಲ.</p>.<p><strong>ನೋಡಲ್ ಅಧಿಕಾರಿಗಳ ನೇಮಕ:</strong> ಗ್ರಾಮ ಪಂಚಾಯಿತಿಗಳಲ್ಲಿ ವಸತಿ, ನಿವೇಶನಗಳ ಯೋಜನೆಗಳ ಆಯ್ಕೆ ವೇಳೆ ಸ್ವಜನ ಪಕ್ಷಪಾತ, ರಾಜಕೀಯ, ಭ್ರಷ್ಟಾಚಾರ ಇತ್ಯಾದಿಗಳು ಮಾತುಗಳು ಕೇಳಿ ಬರುತ್ತವೆ.ಈ ಕಾರಣದಿಂದ ಅರ್ಹ ಫಲಾನುಭವಿಗಳು ಸೌಲಭ್ಯಗಳಿಂದ ಹೊರಗೆ ಉಳಿಯುವ ಸಾಧ್ಯತೆಯೂ ಇದೆ.</p>.<p>ಇದನ್ನು ಮನಗಂಡು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯು ‘ವಸತಿ, ನಿವೇಶನ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಸಂಬಂಧ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳನ್ನು ಜಿಲ್ಲೆಯ 154 ಗ್ರಾಮ ಪಂಚಾಯಿತಿಗಳಿಗೂ ಅನುಷ್ಠಾನ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 38 ಸಾವಿರ ಕುಟುಂಬಗಳಿಗೆ ನಿವೇಶನವಿಲ್ಲ. ಈ ಕುಟುಂಬಗಳು ನಿವೇಶನಕ್ಕೆ ಎದುರು ನೋಡುತ್ತಿವೆ. ಜಿಲ್ಲಾಡಳಿತವು ನಿವೇಶನ ರಹಿತರ ಸಮೀಕ್ಷೆ ನಡೆಸಿತ್ತು. </p>.<p>ಸ್ವಂತ ಸೂರಿನ ಆಸರೆಗಾಗಿ ಕುಟುಂಬಗಳು ಎದುರು ನೋಡುತ್ತಿವೆ. ಸರ್ಕಾರದ ವಿವಿಧ ಆಶ್ರಯ ಯೋಜನೆಗಳ ಅಡಿಯಲ್ಲಿ ನಿವೇಶನ ಮಂಜೂರಾಗುತ್ತದೆ ಎನ್ನುವ ನಿರೀಕ್ಷೆ ಹೊಂದಿದ್ದಾರೆ. ಕೆಲವರು ನಿವೇಶನಗಳಿಗಾಗಿ ಪಂಚಾಯಿತಿಗಳಲ್ಲಿ ನಡೆಯುವ ಗ್ರಾಮ ಸಭೆಗಳತ್ತ ಎದುರು ನೋಡುತ್ತಿದ್ದಾರೆ. </p>.<p>ನಿವೇಶನ ರಹಿತ ಕುಟುಂಬದ ಸಮೀಕ್ಷಾ ವರದಿಯ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 38,076 ಕುಟುಂಬಗಳು ನಿವೇಶನಕ್ಕೆ ಎದುರು ನೋಡುತ್ತಿವೆ. ಈ ಪೈಕಿ ಗರಿಷ್ಠ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯ ಜನರೇ ಇದ್ದಾರೆ. </p>.<p>ಜಿಲ್ಲೆಯ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಚೇಳೂರು, ಮಂಚೇನಹಳ್ಳಿ ತಾಲ್ಲೂಕಿನಲ್ಲಿ ಬಹುಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯ ಜನರು ಇದ್ದಾರೆ. ಗೌರಿಬಿದನೂರು, ಗುಡಿಬಂಡೆ ಭಾಗದಲ್ಲಿ ಪಂಗಡದ ಜನಸಂಖ್ಯೆ ಹೆಚ್ಚಿದೆ. ಸಮೀಕ್ಷಾ ವರದಿಯ ಪ್ರಕಾರ ಪರಿಶಿಷ್ಟ ಜಾತಿಯ 15,153 ಕುಟುಂಬಗಳು, ಪಂಗಡದ 6,453 ಮತ್ತು ಸಾಮಾನ್ಯ ವರ್ಗದ 13,897, ಅಲ್ಪಸಂಖ್ಯಾತ ಸಮುದಾಯದ 2,573 ಕುಟುಂಬಗಳು ನಿವೇಶನರಹಿತರು ಎನ್ನುವ ಹಣೆಪಟ್ಟಿ ಹೊತ್ತಿವೆ.</p>.<p>ಸಚಿವ ಡಾ.ಎಂ.ಸಿ.ಸುಧಾಕರ್ ಪ್ರತಿನಿಧಿಸುವ ಚಿಂತಾಮಣಿ ತಾಲ್ಲೂಕಿನಲ್ಲಿ 2,470 ನಿವೇಶನ ರಹಿತ ಕುಟುಂಬಗಳಿವೆ. ಇದು ಜಿಲ್ಲೆಯಲ್ಲಿಯೇ ಕನಿಷ್ಠ ಮಟ್ಟದಲ್ಲಿ ನಿವೇಶನ ರಹಿತರನ್ನು ಹೊಂದಿರುವ ತಾಲ್ಲೂಕು ಎನಿಸಿದೆ.</p>.<p>ಡಾ.ಕೆ. ಸುಧಾಕರ್ ಪ್ರಯತ್ನ; ಜಮೀನಿಗಿಲ್ಲ ಸಮಸ್ಯೆ: ಜಿಲ್ಲೆಯಲ್ಲಿ ಎಲ್ಲ ತಾಲ್ಲೂಕುಗಳಲ್ಲಿಯೂ ನಿವೇಶನಕ್ಕೆ ಜಮೀನು ಅಗತ್ಯವಿದೆ. ಆದರೆ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಈಗಾಗಲೇ 286.33 ಎಕರೆ ಜಮೀನು ವಾಸಕ್ಕೆ ಯೋಗ್ಯವಿದೆ. ಈ ಜಮೀನಿನಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು.</p>.<p>ಡಾ.ಕೆ.ಸುಧಾಕರ್ ಸಚಿವರಾಗಿದ್ದ ವೇಳೆ ಬಡವರಿಗೆ ನಿವೇಶನ ನೀಡಬೇಕು ಎಂದು ಜಮೀನು ಮಂಜೂರು ಮಾಡಿಸಿದ್ದರು. ಅಂದಿನ ಕಂದಾಯ ಸಚಿವ ಆರ್.ಅಶೋಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮಗಳನ್ನು ಈ ವಿಚಾರವನ್ನು ಒತ್ತಿ ಹೇಳಿದ್ದರು.</p>.<p>ಜಮೀನುಗಳನ್ನು ಗುರುತಿಸಿ ಅಲ್ಲಿ ಬಡಾವಣೆಗಳನ್ನು ನಿರ್ಮಿಸಬೇಕಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿನ ಅವರ ಸೋಲು ಈ ನಿವೇಶನದ ವಿಚಾರವು ರಾಜಕಾರಣಕ್ಕೆ ಜಾರಿತು. ಆದರೆ ಇಂದಿಗೂ ಗುರುತಿಸಿರುವ ಸ್ಥಳಗಳಲ್ಲಿ ಬಡಾವಣೆಗಳ ನಿರ್ಮಾಣ ಸಾಧ್ಯವಾಗಿಲ್ಲ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ಮಂಚೇನಹಳ್ಳಿ ತಾಲ್ಲೂಕಿಗೆ 104 ಎಕರೆ ಜಮೀನು ನಿವೇಶಗಳಿಗಾಗಿ ಅಗತ್ಯವಿದೆ.</p>.<p>ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ದಲಿತ ಸಂಘರ್ಷ ಸಮಿತಿ ದಲಿತರಿಗೆ ಸೂರು ಕಲ್ಪಿಸಬೇಕು ಎಂದು ಹೋರಾಟಗಳನ್ನು ನಡೆಸುತ್ತಿದೆ. ಆದರೆ ಈ ಸೂರಿನ ಆಸರೆ ಇಂದಿಗೂ ಈಡೇರಿಲ್ಲ.</p>.<p><strong>ನೋಡಲ್ ಅಧಿಕಾರಿಗಳ ನೇಮಕ:</strong> ಗ್ರಾಮ ಪಂಚಾಯಿತಿಗಳಲ್ಲಿ ವಸತಿ, ನಿವೇಶನಗಳ ಯೋಜನೆಗಳ ಆಯ್ಕೆ ವೇಳೆ ಸ್ವಜನ ಪಕ್ಷಪಾತ, ರಾಜಕೀಯ, ಭ್ರಷ್ಟಾಚಾರ ಇತ್ಯಾದಿಗಳು ಮಾತುಗಳು ಕೇಳಿ ಬರುತ್ತವೆ.ಈ ಕಾರಣದಿಂದ ಅರ್ಹ ಫಲಾನುಭವಿಗಳು ಸೌಲಭ್ಯಗಳಿಂದ ಹೊರಗೆ ಉಳಿಯುವ ಸಾಧ್ಯತೆಯೂ ಇದೆ.</p>.<p>ಇದನ್ನು ಮನಗಂಡು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯು ‘ವಸತಿ, ನಿವೇಶನ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಸಂಬಂಧ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳನ್ನು ಜಿಲ್ಲೆಯ 154 ಗ್ರಾಮ ಪಂಚಾಯಿತಿಗಳಿಗೂ ಅನುಷ್ಠಾನ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>