ನೀರು, ಔಷಧಿಗಳು, ವೈದ್ಯರು ಎಲ್ಲಾ ಸಮರ್ಪಕವಾಗಿವೆ ಎಂದು ವೈದ್ಯರು ಹೇಳುತ್ತಾರಾದರೂ, ರೋಗಿಗಳು ಕುಡಿಯುವ ನೀರಿಗಾಗಿ ಪರದಾಡುವುದು, ವೈದ್ಯರ ಚೀಟಿ ಹಿಡಿದು ಖಾಸಗಿ ಔಷಧಿ ಅಂಗಡಿಗಳಿಗೆ ಎಡತಾಕುವುದು ಹಾಗೂ ಕೆಲ ತಜ್ಞ ವೈದ್ಯರಿಲ್ಲದೆ ಜಿಲ್ಲಾ ಕೇಂದ್ರಕ್ಕೆ ಹೋಗುವುದು, ಖಾಸಗಿ ಸ್ಕ್ಯಾನಿಂಗ್ ಹಾಗೂ ಪ್ರಯೋಗಾಲಯಗಳಿಗೆ ಹೋಗಿ ಹಣ ತೆತ್ತು ಬರುವುದೂ ನಿಂತಿಲ್ಲ.