ಚಿಂತಾಮಣಿ: ತಾಲ್ಲೂಕಿನ ಮಡಬಹಳ್ಳಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ದಲಿತ ಮಹಿಳೆಗೆ ಭೂ ಮಂಜೂರಾತಿ ಪತ್ರ ನೀಡಬೇಕು ಹಾಗೂ ಅವರ ಕುಟುಂಬದ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಭೀಮ ಮಾರ್ಗ ಸಂಘಟನೆಯು ತಹಶೀಲ್ದಾರ್ಗೆ ಮನವಿ ಮಾಡಿದೆ.