ಚಿಕ್ಕಬಳ್ಳಾಪುರ:‘2019ರಲ್ಲಿ ನಡೆದ ಪಿಎಸ್ಐ ನೇಮಕಾತಿ ವೇಳೆ ನನ್ನ ಮಗನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹುಬ್ಬಳ್ಳಿಯನವೀನ್ ದಳಭಂಜನ್, ಸುಹಾನ್ ಮತ್ತು ಪವನ್₹21,20,000 ಪಡೆದಿದ್ದಾರೆ. ಅವರು ಕೆಲಸ ಕೊಡಿಸಲಿಲ್ಲ. ಹಣ ವಾಪಸ್ ಕೇಳಿದರೂ ನೀಡುತ್ತಿಲ್ಲ. ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು’ ಎಂದು ಜಿ.ಎಸ್ ಸತ್ಯನಾರಾಯಣ ಎಂಬುವವರುಬಾಗೇಪಲ್ಲಿ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.