<p>ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಬೂದಾಳದ ರೈತ ರಾಮಾಂಜಿನಪ್ಪ ಅವರು ಗುಣಿ ಪದ್ಧತಿಯನ್ನು ಅಳವಡಿಸಿಕೊಂಡು ರಾಗಿ ಬೆಳೆದಿದ್ದಾರೆ. ಕಡಿಮೆ ನೀರು ಮತ್ತು ಕಡಿಮೆ ಖರ್ಚಿನಲ್ಲಿ 30–40 ಕ್ವಿಂಟಾಲ್ಗೂ ಹೆಚ್ಚು ಇಳುವರಿ ಪಡೆಯಬಹುದೆಂಬುದನ್ನು ಅವರು ತಮ್ಮ ಹೊಲದಲ್ಲಿ ತೋರಿಸಿದ್ದಾರೆ. ಸರ್ಕಾರದ ₹4,885 ಬೆಂಬಲ ದರದೊಂದಿಗೆ ರಾಗಿ ಬೆಳೆಯಲ್ಲಿ ಇರುವ ಅನೇಕ ಲಾಭಗಳ ಪರಿಚಯವನ್ನು ಈ ವಿಡಿಯೊದಲ್ಲಿ ಮಾಡಿಕೊಟ್ಟಿದ್ದಾರೆ ರಾಮಾಂಜಿನಪ್ಪ. </p>