ನಗರದಲ್ಲಿ ಬುಧವಾರ ಉಪ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ಗೆ ದ್ರೋಹ ಮಾಡಿ ಹೋದ ಅನರ್ಹ ಶಾಸಕರು ಮಾಡಿಸಿಕೊಂಡಷ್ಟು ಕೆಲಸ ಯಾವ ಸಚಿವರೂ ಮಾಡಿಸಿಕೊಂಡಿಲ್ಲ. ದುರಾದೃಷ್ಟ ಪಕ್ಷದಲ್ಲಿ ಹೆಚ್ಚು ಅನುಕೂಲ ಪಡೆದುಕೊಂಡವರೇ ಇವತ್ತು ಪಕ್ಷಕ್ಕೆ ದ್ರೋಹ ಮಾಡಿದರು. ಅನರ್ಹ ಶಾಸಕರು ಅಧಿಕಾರ ದಾಹಕ್ಕೆ ಪಕ್ಷಾಂತರ ಮಾಡಿದ್ದಾರೆ ವಿನಾ ಯಾವ ಅಭಿವೃದ್ಧಿಗಲ್ಲ’ ಎಂದು ಟೀಕಿಸಿದರು.