ನಗರದಲ್ಲಿ ಮಂಗಳವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎನ್ಎನ್) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಮಾಯಕರ ಪ್ರಾಣ ತೆಗೆಯುವ ಅಗತ್ಯವಿತ್ತಾ? ಜನರು ಬೀದಿಗೆ ಬಂದಿದ್ದರಾ? ಯಾರು ಜನರನ್ನು ಬೀದಿಗೆ ಬರುವಂತೆ ಯಾರು ಮಾಡಿದರು? ಇಂತಹ ತಿದ್ದುಪಡಿ ಮಾಡದಿದ್ದರೆ ದೇಶಕ್ಕೆ ಅನಾಹುತ ಕಾದಿತ್ತಾ? ಅನಗತ್ಯವಾಗಿ ಇಂತಹ ವಿಚಾರಗಳನ್ನು ತೆಗೆದುಕೊಂಡು, ಜನರಿಗೆ ಉತ್ತರ ಕೊಡಲು ಆಗದೆ ಕೊನೆಗೆ ಅವರ ಮೇಲೆಯೇ ಆಪಾದನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.