ಸಾಯಿಬಾಬಾ ಅವರ ಸಂದೇಶವಾಹಕ ಮಧುಸೂದನ ಸಾಯಿ ಮಾತನಾಡಿ, ‘ನವರಾತ್ರಿಯ ಆಚರಣೆಯಲ್ಲಿ ಪಾಲ್ಗೊಳ್ಳುವುದು ಮಕ್ಕಳು ತಾಯಿ ಮಡಿಲನ್ನು ಸೇರುವ ದ್ಯೋತಕ. ಹೊರಗೆ ಆಟವಾಡಿ ದಣಿದು ಬಂದ ಮಕ್ಕಳನ್ನು ತಾಯಿ ಉಪಚರಿಸಿ, ದಣಿವು ನಿವಾರಿಸುವಂತೆ, ಭಕ್ತರು ಪ್ರಾಪಂಚಿಕ ಕ್ಷೋಭೆಗಳನ್ನು ಮರೆತು ಮಾತೆ ಮಡಿಲನ್ನು ಸೇರಿದಾಗ ಆತಂಕ, ಕೌತುಕ, ಭಯಗಳಿಂದ ಹೊರಬಂದು ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.