ಗಣವೇಷ ಧರಿಸಿದ ನೂರಾರು ಕಾರ್ಯಕರ್ತರು ಮಧ್ಯಾಹ್ನ 2.30ರ ಸುಮಾರಿಗೆ ನಗರದ ಕೃಷ್ಣ ಚಿತ್ರಮಂದಿರ ರಸ್ತೆಯಲ್ಲಿರುವ ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಪಥಸಂಚಲನ ಮೆರವಣಿಗೆ ಆರಂಭಿಸಿದರು. ಅಲ್ಲಿಂದ ಭುವನೇಶ್ವರಿ ವೃತ್ತ, ಗಂಗಮ್ಮ ಗುಡಿ ರಸ್ತೆ, ದೊಡ್ಡ ಭಜನೆ ಮನೆ ರಸ್ತೆ, ಸುಣ್ಣದ ಕಲ್ಲು ರಸ್ತೆ ಮೂಲಕ ಸಾಗಿದ ಪಥಸಂಚಲನ ಶಿಡ್ಲಘಟ್ಟ ರಸ್ತೆಯಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಸ್ಮಾರಕ ವಿದ್ಯಾಸಂಸ್ಥೆ ಆವರಣ ತಲುಪಿತು.