<p><strong>ಶಿಡ್ಲಘಟ್ಟ:</strong> ರೇಷ್ಮೆ ಬೆಳೆಯುವ ರೈತರ ಜೀವನ ಹಿಂದೆ ತಿಂಗಳ ಸಂಬಳ ಪಡೆಯುವ ಸರ್ಕಾರಿ ನೌಕರರಂತಿತ್ತು. ತಿಂಗಳಿಗೊಂದು ಬೆಳೆ ಬೆಳೆಯುತ್ತಾ, ಅದನ್ನು ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಾರಿ ಹಣ ಪಡೆಯುತ್ತಿದ್ದರು. ಆದರೆ ಈಗ ರೇಷ್ಮೆ ಬೆಳೆಗಾರರ ಬದುಕು ಹಳಿ ತಪ್ಪಿದ್ದು, ಪರ್ಯಾಯ ಬೆಳೆಗಳತ್ತ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಫೆಬ್ರುವರಿ 2026ರಲ್ಲಿ ಎರಡನೇ ಜ್ವರದ ಹುಳ ಚಾಕಿ ಕೇಂದ್ರಗಳಲ್ಲಿ ₹5,500 ರಿಂದ ₹6,000ವರೆಗೆ ಮಾರಾಟವಾಗುತ್ತಿದ್ದುದು ಈಗ ದಿಢೀರನೇ ₹12,000ಕ್ಕೆ ಏರಿಕೆಯಾಗಿದೆ. ಚಾಕಿ ಕೇಂದ್ರಗಳು ಈ ದಿಢೀರ್ ಬೆಲೆ ಏರಿಕೆಗೆ ಬಿತ್ತನೆ ಗೂಡು ಸಿಗುತ್ತಿಲ್ಲ ಎಂಬುದನ್ನು ಕಾರಣವಾಗಿ ಹೇಳುತ್ತಿವೆ.</p>.<p>ಒಂದು ನೂರು ಮೊಟ್ಟೆ ಹುಳು ಸಾಕಣೆ ಮಾಡಬೇಕಾದರೆ, ಹುಳಕ್ಕೆ ₹12,000, ಪೇಪರ್ ಮತ್ತು ಸುಣ್ಣಕ್ಕೆ ₹5,000, 60 ಮೂಟೆ ಹಿಪ್ಪುನೇರಳೆ ಸೊಪ್ಪಿಗೆ (ಒಂದು ಮೂಟೆಗೆ ₹800 ರೂ.) ₹48,000, ಕೂಲಿ, ಚಂದ್ರಂಕಿ ಬಾಡಿಗೆ ಇತ್ಯಾದಿ ₹7,000 ಖರ್ಚು ಬರುತ್ತಿದೆ. ಇಷ್ಟು ವೆಚ್ಚ ಮಾಡಿಕೊಂಡು ರೇಷ್ಮೆ ಹುಳು ಸಾಕುವುದಕ್ಕಿಂತ ಕೂಲಿ ಮಾಡುವುದೇ ಲೇಸು ಎನ್ನುವ ಸ್ಥಿತಿಗೆ ರೈತರು ತಲುಪಿದ್ದಾರೆ.</p>.<p>ರೈತರ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿ, ಇನ್ನಷ್ಟು ಕೊಳವೆ ಬಾವಿ ಕೊರೆಸಿ ಸಾಲದ ಹೊಡೆತಕ್ಕೆ ಸಿಲುಕಿದ್ದಾರೆ. ಹೆಸರಿಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಎಚ್.ಎನ್ ಮತ್ತು ಕೆ.ಸಿ ವ್ಯಾಲಿ ನೀರು ಬರುತ್ತದೆ ಎನ್ನುತ್ತಾ ಸರ್ಕಾರಗಳು ಮೋಸ ಮಾಡುತ್ತಿವೆ ಎಂಬ ಆಕ್ರೋಶ ವ್ಯಕ್ತವಾಗಿದೆ. ರೇಷ್ಮೆಗೂಡು ಬಿಚ್ಚಾಣಿಕೆ ಆಗುತ್ತಿಲ್ಲದ ಕಾರಣ ರೀಲರುಗಳು ಸಂಕಷ್ಟಕ್ಕೆ ಸಿಲುಕಿದ್ದು, ಇದಕ್ಕೆ ವಿಜ್ಞಾನಿಗಳು ಪರಿಹಾರ ಕಂಡುಹಿಡಿಯದಿದ್ದರೆ ಉದ್ದಿಮೆ ನಶಿಸಿಹೋಗಲಿದೆ ಎಂದು ರೇಷ್ಮೆ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.</p>.<p>ಹಿಪ್ಪುನೇರಳೆ ಸೊಪ್ಪಿಗೆ ನುಸಿರೋಗ, ಗಂಟುರೋಗ, ಎಲೆಸುರಳಿ, ಎಲೆಚುಕ್ಕೆ, ಬಿಳಿಎಲೆ ರೋಗ ಮುಂತಾದವುಗಳಿಂದ ಸೊಪ್ಪಿನ ಇಳುವರಿ ಕಡಿಮೆಯಾಗಿದೆ. ಹಿಂದೆ ಒಂದು ಎಕರೆ ಸೊಪ್ಪಿಗೆ 200 ಮೊಟ್ಟೆ ಹುಳು ಸಾಕುತ್ತಿದ್ದವರು ಈಗ 100 ಮೊಟ್ಟೆಗಿಂತ ಕಡಿಮೆ ಸಾಕುವಂತಾಗಿದೆ. ಅವಸಾನದ ಹಂತಕ್ಕೆ ಬಂದಿದ್ದರೂ ಇಲಾಖೆಯಿಂದ ವಿಜ್ಞಾನಿಗಳು ಬಂದು ಪರಿಶೀಲಿಸಿ ಔಷಧಿ ಕಂಡುಹಿಡಿದಿಲ್ಲ. ಕೂಲಿ ಆಳುಗಳ ಸಮಸ್ಯೆಯ ಪರಿಹಾರಕ್ಕಾಗಿ ಸೊಪ್ಪು ಕಟಾವು ಮಾಡುವ ಯಂತ್ರವನ್ನು ಇಲಾಖೆಯವರು ಕಂಡುಹಿಡಿದು ರೈತರಿಗೆ ಒದಗಿಸಿಲ್ಲ. ರೈತರ ಮನವಿಗಳು ನಿಷ್ಪ್ರಯೋಜಕವಾಗಿವೆ.</p>.<p>ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ತಿಂಗಳಿಗೆ 1000, 500, 300 ಮೊಟ್ಟೆ ಹುಳುಗಳನ್ನು ಸಾಕುತ್ತಿದ್ದವರು ಈಗ ಹೆಚ್ಚೆಂದರೆ 150 ಮೊಟ್ಟೆ ಹುಳು ಸಾಕುವ ಸ್ಥಿತಿಗೆ ಬಂದಿದ್ದಾರೆ. ರೇಷ್ಮೆ ರೈತರ ತೋಟದ ಪಕ್ಕದಲ್ಲಿ ಹೂ, ಹಣ್ಣು, ತರಕಾರಿ ಬೆಳೆಯುತ್ತಿರುವ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಬೇಕಿದೆ.</p>.<p>ಶಿಡ್ಲಘಟ್ಟದಲ್ಲಿ ₹200 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಕಾಮಗಾರಿ ಪ್ರಗತಿಯಲ್ಲಿರುವುದು ಸ್ವಾಗತಾರ್ಹ. ಆದರೆ ರೇಷ್ಮೆಗೂಡು ಒಂದು ದಿನಕ್ಕೆ 1,500 ಲಾಟು ಬರುತ್ತಿದ್ದುದು ಈಗ 200 ರಿಂದ 300 ಲಾಟುಗಳಿಗೆ ಇಳಿಮುಖವಾಗಿದೆ. ಮೊದಲಿನಂತಾಗಲು ರೇಷ್ಮೆ ಇಲಾಖೆ ಜಾಗೃತವಾಗಬೇಕು ಎಂಬುದು ರೇಷ್ಮೆ ಬೆಳೆಗಾರರ ಪ್ರಶ್ನೆ.</p>.<p>ರೈತರ ಪಂಪುಸೆಟ್ಟುಗಳಿಗೆ ರಾತ್ರಿ ವೇಳೆ 4 ಗಂಟೆ, ಹಗಲಿನಲ್ಲಿ 3 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ರೈತರು ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗದ ಕಾರಣ ಹಗಲಿನಲ್ಲಿ 10 ಗಂಟೆ ಮೂರು ಫೇಸ್ ವಿದ್ಯುತ್ ನೀಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.</p>.<p>ಹಿಂದೆ ರೇಷ್ಮೆ ಬೆಳೆಗೆ ಅಗತ್ಯವಿರುವ ಔಷಧಿ, ಸೋಂಕು ನಿವಾರಕ, ಸುಣ್ಣ, ಬ್ಲೀಚಿಂಗ್, ಹುಳು ಮನೆಗೆ ಹಸಿರು ಪರದೆ, ಕ್ರೇಟ್ ಮುಂತಾದವುಗಳನ್ನು ನೀಡಲಾಗುತ್ತಿತ್ತು. ಈಗ ಕೇವಲ ಶೇ 10ರಷ್ಟು ರೈತರಿಗೆ ಕೆಲವನ್ನು ಮಾತ್ರ ನೀಡಲಾಗುತ್ತಿದೆ. ರೇಷ್ಮೆ ಬೆಳೆಗಾರರಿಗೆ ಟ್ರ್ಯಾಕ್ಟರ್, ಟಿಲ್ಲರ್, ಚಾಪ್ ಕಟ್ಟರ್ ಮುಂತಾದವುಗಳಿಗೆ ಶೇ 75 ರಷ್ಟು ರಿಯಾಯಿತಿ ದರದಲ್ಲಿ ನೀಡಬೇಕು. ರೇಷ್ಮೆ ತೋಟವನ್ನು ನರೇಗಾ ಯೋಜನೆಯಲ್ಲಿ ಸೇರಿಸಿ ಟ್ರೆಂಚ್, ಮಲ್ಚಿಂಗ್ ಹಾಗೂ ಕಾಂಪೋಸ್ಟ್ ಗೊಬ್ಬರಗಳನ್ನು ಉಚಿತವಾಗಿ ನೀಡಬೇಕು ಎಂಬುದು ರೇಷ್ಮೆ ಬೆಳೆಗಾರರ ಬೇಡಿಕೆ.</p>.<p>ಸರ್ಕಾರ ಮತ್ತು ರೇಷ್ಮೆ ಇಲಾಖೆ ರೈತರ ಕಡೆ ಗಮನ ಹರಿಸುತ್ತಿಲ್ಲ. ಪ್ರತಿ 6 ತಿಂಗಳಿಗೊಮ್ಮೆ ರೈತರು ಮತ್ತು ರೀಲರುಗಳ ಸಭೆ ಕರೆದು ರಾಜ್ಯಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕು. ರೇಷ್ಮೆ ಬೆಳೆಗಾರರು, ರೀಲರುಗಳು, ವಿಜ್ಞಾನಿಗಳು, ವೀವರುಗಳು ಸೇರಿದಂತೆ ರಾಜ್ಯ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಅಧಿಕಾರಿಗಳ ಮಟ್ಟದಲ್ಲಿ ಹಾಗೂ ರೇಷ್ಮೆ ಸಚಿವರ ನೇತೃತ್ವದಲ್ಲಿ ರಾಜ್ಯಮಟ್ಟದ ಸಭೆ ನಡೆಸಿ ಪರಿಹಾರ ಕಂಡುಕೊಳ್ಳದಿದ್ದರೆ, ರೇಷ್ಮೆ ಉದ್ದಿಮೆ ನಶಿಸಿಹೋಗಲಿದೆ ಎಂದು ಪ್ರಗತಿಪರ ರೇಷ್ಮೆ ಕೃಷಿಕ ಎಚ್.ಜಿ.ಗೋಪಾಲಗೌಡ ಆತಂಕ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ:</strong> ರೇಷ್ಮೆ ಬೆಳೆಯುವ ರೈತರ ಜೀವನ ಹಿಂದೆ ತಿಂಗಳ ಸಂಬಳ ಪಡೆಯುವ ಸರ್ಕಾರಿ ನೌಕರರಂತಿತ್ತು. ತಿಂಗಳಿಗೊಂದು ಬೆಳೆ ಬೆಳೆಯುತ್ತಾ, ಅದನ್ನು ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಾರಿ ಹಣ ಪಡೆಯುತ್ತಿದ್ದರು. ಆದರೆ ಈಗ ರೇಷ್ಮೆ ಬೆಳೆಗಾರರ ಬದುಕು ಹಳಿ ತಪ್ಪಿದ್ದು, ಪರ್ಯಾಯ ಬೆಳೆಗಳತ್ತ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಫೆಬ್ರುವರಿ 2026ರಲ್ಲಿ ಎರಡನೇ ಜ್ವರದ ಹುಳ ಚಾಕಿ ಕೇಂದ್ರಗಳಲ್ಲಿ ₹5,500 ರಿಂದ ₹6,000ವರೆಗೆ ಮಾರಾಟವಾಗುತ್ತಿದ್ದುದು ಈಗ ದಿಢೀರನೇ ₹12,000ಕ್ಕೆ ಏರಿಕೆಯಾಗಿದೆ. ಚಾಕಿ ಕೇಂದ್ರಗಳು ಈ ದಿಢೀರ್ ಬೆಲೆ ಏರಿಕೆಗೆ ಬಿತ್ತನೆ ಗೂಡು ಸಿಗುತ್ತಿಲ್ಲ ಎಂಬುದನ್ನು ಕಾರಣವಾಗಿ ಹೇಳುತ್ತಿವೆ.</p>.<p>ಒಂದು ನೂರು ಮೊಟ್ಟೆ ಹುಳು ಸಾಕಣೆ ಮಾಡಬೇಕಾದರೆ, ಹುಳಕ್ಕೆ ₹12,000, ಪೇಪರ್ ಮತ್ತು ಸುಣ್ಣಕ್ಕೆ ₹5,000, 60 ಮೂಟೆ ಹಿಪ್ಪುನೇರಳೆ ಸೊಪ್ಪಿಗೆ (ಒಂದು ಮೂಟೆಗೆ ₹800 ರೂ.) ₹48,000, ಕೂಲಿ, ಚಂದ್ರಂಕಿ ಬಾಡಿಗೆ ಇತ್ಯಾದಿ ₹7,000 ಖರ್ಚು ಬರುತ್ತಿದೆ. ಇಷ್ಟು ವೆಚ್ಚ ಮಾಡಿಕೊಂಡು ರೇಷ್ಮೆ ಹುಳು ಸಾಕುವುದಕ್ಕಿಂತ ಕೂಲಿ ಮಾಡುವುದೇ ಲೇಸು ಎನ್ನುವ ಸ್ಥಿತಿಗೆ ರೈತರು ತಲುಪಿದ್ದಾರೆ.</p>.<p>ರೈತರ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿ, ಇನ್ನಷ್ಟು ಕೊಳವೆ ಬಾವಿ ಕೊರೆಸಿ ಸಾಲದ ಹೊಡೆತಕ್ಕೆ ಸಿಲುಕಿದ್ದಾರೆ. ಹೆಸರಿಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಎಚ್.ಎನ್ ಮತ್ತು ಕೆ.ಸಿ ವ್ಯಾಲಿ ನೀರು ಬರುತ್ತದೆ ಎನ್ನುತ್ತಾ ಸರ್ಕಾರಗಳು ಮೋಸ ಮಾಡುತ್ತಿವೆ ಎಂಬ ಆಕ್ರೋಶ ವ್ಯಕ್ತವಾಗಿದೆ. ರೇಷ್ಮೆಗೂಡು ಬಿಚ್ಚಾಣಿಕೆ ಆಗುತ್ತಿಲ್ಲದ ಕಾರಣ ರೀಲರುಗಳು ಸಂಕಷ್ಟಕ್ಕೆ ಸಿಲುಕಿದ್ದು, ಇದಕ್ಕೆ ವಿಜ್ಞಾನಿಗಳು ಪರಿಹಾರ ಕಂಡುಹಿಡಿಯದಿದ್ದರೆ ಉದ್ದಿಮೆ ನಶಿಸಿಹೋಗಲಿದೆ ಎಂದು ರೇಷ್ಮೆ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.</p>.<p>ಹಿಪ್ಪುನೇರಳೆ ಸೊಪ್ಪಿಗೆ ನುಸಿರೋಗ, ಗಂಟುರೋಗ, ಎಲೆಸುರಳಿ, ಎಲೆಚುಕ್ಕೆ, ಬಿಳಿಎಲೆ ರೋಗ ಮುಂತಾದವುಗಳಿಂದ ಸೊಪ್ಪಿನ ಇಳುವರಿ ಕಡಿಮೆಯಾಗಿದೆ. ಹಿಂದೆ ಒಂದು ಎಕರೆ ಸೊಪ್ಪಿಗೆ 200 ಮೊಟ್ಟೆ ಹುಳು ಸಾಕುತ್ತಿದ್ದವರು ಈಗ 100 ಮೊಟ್ಟೆಗಿಂತ ಕಡಿಮೆ ಸಾಕುವಂತಾಗಿದೆ. ಅವಸಾನದ ಹಂತಕ್ಕೆ ಬಂದಿದ್ದರೂ ಇಲಾಖೆಯಿಂದ ವಿಜ್ಞಾನಿಗಳು ಬಂದು ಪರಿಶೀಲಿಸಿ ಔಷಧಿ ಕಂಡುಹಿಡಿದಿಲ್ಲ. ಕೂಲಿ ಆಳುಗಳ ಸಮಸ್ಯೆಯ ಪರಿಹಾರಕ್ಕಾಗಿ ಸೊಪ್ಪು ಕಟಾವು ಮಾಡುವ ಯಂತ್ರವನ್ನು ಇಲಾಖೆಯವರು ಕಂಡುಹಿಡಿದು ರೈತರಿಗೆ ಒದಗಿಸಿಲ್ಲ. ರೈತರ ಮನವಿಗಳು ನಿಷ್ಪ್ರಯೋಜಕವಾಗಿವೆ.</p>.<p>ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ತಿಂಗಳಿಗೆ 1000, 500, 300 ಮೊಟ್ಟೆ ಹುಳುಗಳನ್ನು ಸಾಕುತ್ತಿದ್ದವರು ಈಗ ಹೆಚ್ಚೆಂದರೆ 150 ಮೊಟ್ಟೆ ಹುಳು ಸಾಕುವ ಸ್ಥಿತಿಗೆ ಬಂದಿದ್ದಾರೆ. ರೇಷ್ಮೆ ರೈತರ ತೋಟದ ಪಕ್ಕದಲ್ಲಿ ಹೂ, ಹಣ್ಣು, ತರಕಾರಿ ಬೆಳೆಯುತ್ತಿರುವ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಬೇಕಿದೆ.</p>.<p>ಶಿಡ್ಲಘಟ್ಟದಲ್ಲಿ ₹200 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಕಾಮಗಾರಿ ಪ್ರಗತಿಯಲ್ಲಿರುವುದು ಸ್ವಾಗತಾರ್ಹ. ಆದರೆ ರೇಷ್ಮೆಗೂಡು ಒಂದು ದಿನಕ್ಕೆ 1,500 ಲಾಟು ಬರುತ್ತಿದ್ದುದು ಈಗ 200 ರಿಂದ 300 ಲಾಟುಗಳಿಗೆ ಇಳಿಮುಖವಾಗಿದೆ. ಮೊದಲಿನಂತಾಗಲು ರೇಷ್ಮೆ ಇಲಾಖೆ ಜಾಗೃತವಾಗಬೇಕು ಎಂಬುದು ರೇಷ್ಮೆ ಬೆಳೆಗಾರರ ಪ್ರಶ್ನೆ.</p>.<p>ರೈತರ ಪಂಪುಸೆಟ್ಟುಗಳಿಗೆ ರಾತ್ರಿ ವೇಳೆ 4 ಗಂಟೆ, ಹಗಲಿನಲ್ಲಿ 3 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ರೈತರು ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗದ ಕಾರಣ ಹಗಲಿನಲ್ಲಿ 10 ಗಂಟೆ ಮೂರು ಫೇಸ್ ವಿದ್ಯುತ್ ನೀಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.</p>.<p>ಹಿಂದೆ ರೇಷ್ಮೆ ಬೆಳೆಗೆ ಅಗತ್ಯವಿರುವ ಔಷಧಿ, ಸೋಂಕು ನಿವಾರಕ, ಸುಣ್ಣ, ಬ್ಲೀಚಿಂಗ್, ಹುಳು ಮನೆಗೆ ಹಸಿರು ಪರದೆ, ಕ್ರೇಟ್ ಮುಂತಾದವುಗಳನ್ನು ನೀಡಲಾಗುತ್ತಿತ್ತು. ಈಗ ಕೇವಲ ಶೇ 10ರಷ್ಟು ರೈತರಿಗೆ ಕೆಲವನ್ನು ಮಾತ್ರ ನೀಡಲಾಗುತ್ತಿದೆ. ರೇಷ್ಮೆ ಬೆಳೆಗಾರರಿಗೆ ಟ್ರ್ಯಾಕ್ಟರ್, ಟಿಲ್ಲರ್, ಚಾಪ್ ಕಟ್ಟರ್ ಮುಂತಾದವುಗಳಿಗೆ ಶೇ 75 ರಷ್ಟು ರಿಯಾಯಿತಿ ದರದಲ್ಲಿ ನೀಡಬೇಕು. ರೇಷ್ಮೆ ತೋಟವನ್ನು ನರೇಗಾ ಯೋಜನೆಯಲ್ಲಿ ಸೇರಿಸಿ ಟ್ರೆಂಚ್, ಮಲ್ಚಿಂಗ್ ಹಾಗೂ ಕಾಂಪೋಸ್ಟ್ ಗೊಬ್ಬರಗಳನ್ನು ಉಚಿತವಾಗಿ ನೀಡಬೇಕು ಎಂಬುದು ರೇಷ್ಮೆ ಬೆಳೆಗಾರರ ಬೇಡಿಕೆ.</p>.<p>ಸರ್ಕಾರ ಮತ್ತು ರೇಷ್ಮೆ ಇಲಾಖೆ ರೈತರ ಕಡೆ ಗಮನ ಹರಿಸುತ್ತಿಲ್ಲ. ಪ್ರತಿ 6 ತಿಂಗಳಿಗೊಮ್ಮೆ ರೈತರು ಮತ್ತು ರೀಲರುಗಳ ಸಭೆ ಕರೆದು ರಾಜ್ಯಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕು. ರೇಷ್ಮೆ ಬೆಳೆಗಾರರು, ರೀಲರುಗಳು, ವಿಜ್ಞಾನಿಗಳು, ವೀವರುಗಳು ಸೇರಿದಂತೆ ರಾಜ್ಯ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಅಧಿಕಾರಿಗಳ ಮಟ್ಟದಲ್ಲಿ ಹಾಗೂ ರೇಷ್ಮೆ ಸಚಿವರ ನೇತೃತ್ವದಲ್ಲಿ ರಾಜ್ಯಮಟ್ಟದ ಸಭೆ ನಡೆಸಿ ಪರಿಹಾರ ಕಂಡುಕೊಳ್ಳದಿದ್ದರೆ, ರೇಷ್ಮೆ ಉದ್ದಿಮೆ ನಶಿಸಿಹೋಗಲಿದೆ ಎಂದು ಪ್ರಗತಿಪರ ರೇಷ್ಮೆ ಕೃಷಿಕ ಎಚ್.ಜಿ.ಗೋಪಾಲಗೌಡ ಆತಂಕ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>