ಚಿಕ್ಕಮಗಳೂರು:ಕರಡಿಗವಿ ಮಠದ ಸ್ವಾಮೀಜಿಶಂಕರಾನಂದ (60) ಮಂಗಳವಾರಲಿಂಗೈಕ್ಯರಾದರು.
ಕೆಲ ತಿಂಗಳಿಂದ ಸ್ವಾಮೀಜಿ ಆರೋಗ್ಯ ಹದಗೆಟ್ಟಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸ್ವಾಮೀಜಿ ಎರಡು ತಿಂಗಳಿಂದ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಅವರನ್ನು ಮಠಕ್ಕೆ ಕರೆತರಲಾಗಿತ್ತು.ಒಂದೇ ಗಂಟೆಯಲ್ಲಿ ಶಂಕರಾನಂದ ಸ್ವಾಮೀಜಿ ವಿಧಿವಶರಾಗಿದ್ದಾರೆ.