<p>ಶಿಡ್ಲಘಟ್ಟ: ‘ಬೇಸಿಗೆ ಶಿಬಿರ ಕೇವಲ ಕೆಲವು ದಿನಗಳ ಚಟುವಟಿಕೆಯಲ್ಲ, ಬದಲಿಗೆ ಮಕ್ಕಳ ಜೀವನದಲ್ಲಿ ಮಹತ್ವದ ಅಧ್ಯಾಯವಾಗಿ ಬದಲಾಗಿದೆ’ ಎಂದು ಕರಾಟೆ ಶಿಕ್ಷಕ ಅರುಣ್ ಕುಮಾರ್ ಹೇಳಿದರು.</p>.<p>ಅರಳೇಪೇಟೆಯ ಬಸವೇಶ್ವರ ದೇವಾಲಯದ ಆವರಣದಲ್ಲಿ ಜೈ ಭಾರತ್ ಕರಾಟೆ ಮತ್ತು ಮಾರ್ಷಲ್ ಆರ್ಟ್ ಅಸೋಸಿಯೇಷನ್ ವತಿಯಿಂದ 30 ದಿನ ನಡೆದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.</p>.<p>ಶಿಬಿರದಲ್ಲಿ ಮಕ್ಕಳು ಕರಾಟೆಯ ತಾಕತ್ತು ಕಲಿತಿದ್ದೀರಿ. ಅದು ದೃಢತೆಯನ್ನು ಹೆಚ್ಚಿಸುತ್ತದೆ. ಸ್ಕೇಟಿಂಗ್ನಲ್ಲಿ ಸಮತೋಲನ ಕಲಿತಿದ್ದೀರಿ. ಜೀವನದಲ್ಲಿ ಸರಿಯಾಗಿ ನಿಲ್ಲುವುದನ್ನು ಕಲಿಸುತ್ತದೆ. ಹಲವು ಕ್ರೀಡೆಗಳು ನಿಮ್ಮನ್ನು ತಂಡದ ಆಟಗಾರರನ್ನಾಗಿ ಮಾಡಿವೆ. ಈ ಎಲ್ಲ ಕ್ರೀಡೆಗಳು ನಿಮಗೆ ಕೇವಲ ಆಟವಲ್ಲ, ಜೀವನದ ಪಾಠಗಳು. ಉತ್ಸಾಹದಿಂದ ಆರಂಭಿಸಿ, ತಪ್ಪುಗಳಿಂದ ಕಲಿತು, ಗೆಲುವಿನ ಸ್ವಾದ ಅನುಭವಿಸಿದ್ದೀರಿ. ನೀವು ಈಗ ಆತ್ಮವಿಶ್ವಾಸದಿಂದ ತುಂಬಿದ್ದೀರಿ. ಆರೋಗ್ಯಕ್ಕೆ ಸ್ನೇಹಿತರಾಗಿದ್ದೀರಿ ಎಂದು ಹೇಳಿದರು.</p>.<p>ಶಿಬಿರದಲ್ಲಿ ಮಕ್ಕಳಿಗೆ ಕರಾಟೆ, ಸ್ಕೇಟಿಂಗ್, ಸ್ವಿಮ್ಮಿಂಗ್, ಜಿಮ್ನಾಸ್ಟಿಕ್, ಡ್ಯಾನ್ಸ್, ಯೋಗ, ಕ್ರೀಡೆಗಳನ್ನು ಕಲಿಸಲಾಯಿತು. ಈ ಶಿಬಿರದಲ್ಲಿ 30 ಹೆಚ್ಚು ಮಕ್ಕಳು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-16-509245596</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿಡ್ಲಘಟ್ಟ: ‘ಬೇಸಿಗೆ ಶಿಬಿರ ಕೇವಲ ಕೆಲವು ದಿನಗಳ ಚಟುವಟಿಕೆಯಲ್ಲ, ಬದಲಿಗೆ ಮಕ್ಕಳ ಜೀವನದಲ್ಲಿ ಮಹತ್ವದ ಅಧ್ಯಾಯವಾಗಿ ಬದಲಾಗಿದೆ’ ಎಂದು ಕರಾಟೆ ಶಿಕ್ಷಕ ಅರುಣ್ ಕುಮಾರ್ ಹೇಳಿದರು.</p>.<p>ಅರಳೇಪೇಟೆಯ ಬಸವೇಶ್ವರ ದೇವಾಲಯದ ಆವರಣದಲ್ಲಿ ಜೈ ಭಾರತ್ ಕರಾಟೆ ಮತ್ತು ಮಾರ್ಷಲ್ ಆರ್ಟ್ ಅಸೋಸಿಯೇಷನ್ ವತಿಯಿಂದ 30 ದಿನ ನಡೆದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.</p>.<p>ಶಿಬಿರದಲ್ಲಿ ಮಕ್ಕಳು ಕರಾಟೆಯ ತಾಕತ್ತು ಕಲಿತಿದ್ದೀರಿ. ಅದು ದೃಢತೆಯನ್ನು ಹೆಚ್ಚಿಸುತ್ತದೆ. ಸ್ಕೇಟಿಂಗ್ನಲ್ಲಿ ಸಮತೋಲನ ಕಲಿತಿದ್ದೀರಿ. ಜೀವನದಲ್ಲಿ ಸರಿಯಾಗಿ ನಿಲ್ಲುವುದನ್ನು ಕಲಿಸುತ್ತದೆ. ಹಲವು ಕ್ರೀಡೆಗಳು ನಿಮ್ಮನ್ನು ತಂಡದ ಆಟಗಾರರನ್ನಾಗಿ ಮಾಡಿವೆ. ಈ ಎಲ್ಲ ಕ್ರೀಡೆಗಳು ನಿಮಗೆ ಕೇವಲ ಆಟವಲ್ಲ, ಜೀವನದ ಪಾಠಗಳು. ಉತ್ಸಾಹದಿಂದ ಆರಂಭಿಸಿ, ತಪ್ಪುಗಳಿಂದ ಕಲಿತು, ಗೆಲುವಿನ ಸ್ವಾದ ಅನುಭವಿಸಿದ್ದೀರಿ. ನೀವು ಈಗ ಆತ್ಮವಿಶ್ವಾಸದಿಂದ ತುಂಬಿದ್ದೀರಿ. ಆರೋಗ್ಯಕ್ಕೆ ಸ್ನೇಹಿತರಾಗಿದ್ದೀರಿ ಎಂದು ಹೇಳಿದರು.</p>.<p>ಶಿಬಿರದಲ್ಲಿ ಮಕ್ಕಳಿಗೆ ಕರಾಟೆ, ಸ್ಕೇಟಿಂಗ್, ಸ್ವಿಮ್ಮಿಂಗ್, ಜಿಮ್ನಾಸ್ಟಿಕ್, ಡ್ಯಾನ್ಸ್, ಯೋಗ, ಕ್ರೀಡೆಗಳನ್ನು ಕಲಿಸಲಾಯಿತು. ಈ ಶಿಬಿರದಲ್ಲಿ 30 ಹೆಚ್ಚು ಮಕ್ಕಳು ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-16-509245596</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>