ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಯಾವತ್ತಾದ್ರು ಮುಂಬಾಗಿಲಿನ ಮುಖ್ಯಮಂತ್ರಿ ಆಗಿದ್ರಾ?: ಸಿದ್ದರಾಮಯ್ಯ

Last Updated 2 ಡಿಸೆಂಬರ್ 2019, 10:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:‘122 ಜನ ಗೆದ್ದು ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದೆ. ಯಡಿಯೂರಪ್ಪ ಯಾವತ್ತಾದರೂ ಮುಂಬಾಗಿಲಿನಿಂದ ಬಂದಿದ್ದಾರಾ? ಇಲ್ಲ. ಅವರು ಯಾವಾಗಲು ಹಿಂಬಾಗಿಲಿನ ಮುಖ್ಯಮಂತ್ರಿ,’ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯಟೀಕಿಸಿದರು.

ಚಿಕ್ಕಬಳ್ಳಾಪುರದಲ್ಲಿ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು,‘2008ರಲ್ಲಿ 9 ಜನ ಕೊಂಡುಕೊಂಡು ಮುಖ್ಯಮ ಈ ಸರಿ 17 ಜನರನ್ನು ಪಕ್ಷಾಂತರ ಮಾಡಿಸಿ ಮುಖ್ಯಮಂತ್ರಿ ಆಗಿದ್ದಾರೆ. ನನಗೆ ತಿರುಕನ ಕನಸು ಕಾಣುತ್ತಿದ್ದಾನೆ ಎಂದು ಹೇಳುವುದಕ್ಕೆ ಅವರಿಗೆ ಯಾವ ನೈತಿಕತೆ ಇದೆ,’ ಎಂದು ಕಿಡಿಕಾಡಿದರು.

‘ದೇವೇಗೌಡರು ಏನು ಹೇಳಿದ್ದಾರೆ? ಮೈತ್ರಿ ಆಗಲ್ಲ ಎಂದಿದ್ದಾರೆ. ನಾವು ಆಗಲ್ಲ ಅಷ್ಟೇ,’ ಎಂದು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಕುರಿತು ಮಾತನಾಡಿದರು.

‘ಕಾಂಗ್ರೆಸ್‌ ಸೋಲುತ್ತದೆ ಎಂದು ಹೇಳುವ ಶ್ರೀನಿವಾಸಪ್ರಸಾದ್‌ ಅವರು ಬಿಜೆಪಿಗೆ ಹೋದ ನಂತರ ನಡೆದ ನಂಜನಗೂಡು ಉಪಚುನಾವಣೆಯಲ್ಲಿ ಏನಾದರು?ಅವರೆಲ್ಲ ನಮ್ಮ ಬಗ್ಗೆ ಮಾತನಾಡುತ್ತಾರೆ,’ ಎಂದು ವ್ಯಂಗ್ಯವಾಡಿದರು.

‘ದನ, ಕುರಿ, ಎಮ್ಮೆಗಳೇನ್ರಿ ಅವರನ್ನು ನಾವು ಕಾಯುವುದಕ್ಕೆ. ಅವರು ಜನರ ಸೇವಕರಾಗಿರಬೇಕು. ಅವರಿಗೆ ಪ್ರಜಾಪ್ರಭತ್ವದ ಬಗ್ಗೆ ಗೊತ್ತಿದೆಯೇನ್ರಿ,’ ಎಂದು ಸುಧಾರಕ್‌ ಅವರನ್ನು ತರಾಟೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT