ಮಾವು ಅಭಿವೃದ್ಧಿ ಕೇಂದ್ರದಿಂದ ರೈತರಿಗೆ ಏನೂ ಉಪಯೋಗವಾಗುತ್ತಿಲ್ಲ. ಅಧಿಕಾರಿಗಳು ಕಚೇರಿಗೆ ಮಾತ್ರ ಸೀಮಿತವಾಗಿದ್ದಾರೆ. ಮಾವು ಬೆಳೆಗಾರರೊಂದಿಗೆ ಸಂಪರ್ಕವೇ ಇಲ್ಲ. ಮಾವಿನ ತೋಟಗಳಿಗೆ ಭೇಟಿ ನೀಡುವುದಾಗಲಿ, ಪ್ರಾತ್ಯಕ್ಷಿಕೆಗಳನ್ನು ನಡೆಸುವುದಾಗಿ, ಸಲಹೆ ಸೂಚನೆಗಳನ್ನು ನೀಡುವ ಯಾವ ಕೆಲಸವನ್ನು ಮಾಡುತ್ತಿಲ್ಲ ಎಂದು ರೈತ ಸಂಘಟನೆಗಳ ಮುಖಂಡರು ದೂರಿದರು.