ಮುಳಬಾಗಿಲು: ಅತಿವೇಗ ಮತ್ತು ಅಜಾಗರೂಕತೆಯಿಂದ ಟೆಂಪೋ ಚಾಲನೆ ಮಾಡಿ ಜೀವಹಾನಿಗೆ ಕಾರಣನಾಗಿದ್ದ ವಾಹನ ಚಾಲಕ ರಮೇಶ್ಗೆ ಒಂದು ವರ್ಷ ಕಾರಾಗೃಹ ವಾಸ ಹಾಗೂ ₹10 ಸಾವಿರ ಜುಲ್ಮಾನೆ ವಿಧಿಸಿ ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಧೀಶ ಹಾಜಿ ಹುಸೇನಾ ಸಾಬಾ ಯಾದವಾಡ ತೀರ್ಪು ನೀಡಿದ್ದಾರೆ.
ಆರೋಪಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಕಲಂ 279 ಮತ್ತು 304(ಎ) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಮಾಡಿರುವನು. ಅಭಿಯೋಜನಾ ಪಕ್ಷದವರು ಋಜುವಾತು ಪಡಿಸಿರುವುದರಿಂದ ದಂಡಪ್ರಕ್ರಿಯಾ ಸಂಹಿತೆ ಕಲಂ 255(2) ಅಡಿಯಲ್ಲಿ ಅಪರಾಧಿ ಎಂದು ತೀರ್ಮಾನಿಸಲಾಗಿದೆ. ಕಲಂ 304(ಎ)ರಡಿ ಅಪರಾಧಕ್ಕೆ ಶಿಕ್ಷೆ ವಿಧಿಸಲಾಗಿದೆ.