ಶಾ ತಿರುಮಲ ಬೆಟ್ಟ ಇಳಿದು ಕೆಳಗೆ ಬಂದಾಗ ಅಲಿಪಿರಿ–ಗರುಡ ತಪಾಸಣಾ ಠಾಣೆಯ ಸಮೀಪ ಸೇರಿದ್ದ ಟಿಡಿಪಿ ಕಾರ್ಯಕರ್ತರು ರಸ್ತೆ ತಡೆಗೆ ಯತ್ನಿಸಿದರು. ಪ್ರತಿಭಟನಕಾರರು ಕಪ್ಪು ಪಟ್ಟಿ ಧರಿಸಿ, ಟಿಡಿಪಿ ಧ್ವಜಗಳನ್ನು ಹಿಡಿದಿದ್ದರು. ‘ಶಾ ವಾಪಸ್ ಹೋಗಿ’, ‘ನಮಗೆ ನ್ಯಾಯ ಬೇಕು’, ‘ವಿಶೇಷ ಸ್ಥಾನಮಾನ ನೀಡಿ’ ಎಂಬ ಘೋಷಣೆಗಳು ಮೊಳಗಿದವು.