<p><strong>ಚಿಕ್ಕಬಳ್ಳಾಪುರ:</strong> ರಾಜ್ಯ ರಾಜಕಾರಣದಲ್ಲಿಯೇ ಉಳಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಡಿ.ಕೆ.ಶಿವಕುಮಾರ್ ಅವರಿಗೆ ಎಚ್ಚರಿಕೆ ಗಂಟೆ ಎಂದು ಸಂಸದ ಡಾ.ಕೆ.ಸುಧಾಕರ್ ವಿಶ್ಲೇಷಿಸಿದರು.</p><p>ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಅನುಪಸ್ಥಿತಿ ಖಂಡಿತವಾಗಿ ಕಾಣಲಿದೆ. ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಅವರು ಸಾಮಾಜಿಕ ನ್ಯಾಯ, ಸಮಾನತೆ, ಸಾಮಾನ್ಯ ಜನರಿಗೆ ಉತ್ತಮ ಕಾರ್ಯಕ್ರಮ ನೀಡಿದ್ದಾರೆ ಎಂದು ಹೇಳಿದರು.</p><p>ಸಿದ್ದರಾಮಯ್ಯ ಅವರು ಸುಮ್ಮನೆ ಕೂರುವವರಲ್ಲ. ಭಿನ್ನಾಭಿಪ್ರಾಯ ಹೊಂದಿರುವ ಶಾಸಕರು ಅಭಿಯಾನ ಮಾಡಿದರೆ ಅದರ ಕೇಂದ್ರವಾಗಿ ಸಿದ್ದರಾಮಯ್ಯ ಇರುತ್ತಾರೆ ಎಂದರು.</p><p>ಡಿ.ಕೆ.ಶಿವಕುಮಾರ್ ಅವರು ಹೋರಾಟ, ಸಂಘಟನೆ ಮಾಡಿದ್ದಾರೆ. ಈಗ ಮುಖ್ಯಮಂತ್ರಿ ಸ್ಥಾನ ದಕ್ಕಿಸಿಕೊಳ್ಳುತ್ತಿದ್ದಾರೆ. ರಿಯಲ್ ಎಸ್ಟೇಟ್ ಎನ್ನುವುದು ಕಳ್ಳತನ ಅಥವಾ ದರೋಡೆಯಲ್ಲ. ಅನ್ಯಾಯ ಮಾಡದೆ ಆ ವೃತ್ತಿ ಮಾಡಬೇಕು. ಡಿ.ಕೆ.ಶಿವಕುಮಾರ್ ಅವರೊಬ್ಬರೇ ಅಲ್ಲ ಅನೇಕರು ಆ ವೃತ್ತಿ ಮಾಡುತ್ತಿದ್ದಾರೆ. ಹಾಗಾಗಿ ಆ ವಿಚಾರದಲ್ಲಿ ಯಾರೂ ಟೀಕೆ ಮಾಡಬಾರದು. ಅವರು ಮುಖ್ಯಮಂತ್ರಿಯಾದ ಆರು ತಿಂಗಳ ಬಳಿಕ ಆಡಳಿತದ ವೈಖರಿ ವಿಶ್ಲೇಷಿಸಬೇಕು ಎಂದರು.</p><p>ಈಗ ಇರುವ ಸಚಿವರು ಮಾಜಿಗಳಾಗಿದ್ದಾರೆ. ಹೊಸ ತಂಡ ಕಟ್ಟಿಕೊಳ್ಳಲು ಡಿ.ಕೆ.ಶಿವಕುಮಾರ್ಗೆ ಹೈಕಮಾಂಡ್ ಎಷ್ಟು ಅವಕಾಶ ನೀಡಲಿದೆ ಎಂದು ನೋಡಬೇಕಿದೆ. ಕಾಂಗ್ರೆಸ್ನಲ್ಲಿ ಮೂರು ನಾಲ್ಕು ಗುಂಪುಗಳು ಇರುತ್ತವೆ. ಹೈಕಮಾಂಡ್, ಜಾತಿ ಎಂಬಂತೆ ಕ್ಯಾಂಪ್ಗಳಿರುತ್ತವೆ. ಇವೆಲ್ಲ ಸವಾಲುಗಳನ್ನು ಮೀರಿ ಅವರು ಆಡಳಿತ ನಡೆಸಬೇಕಿದೆ ಎಂದರು.</p>.ಸಿದ್ದರಾಮಯ್ಯ ರಾಜೀನಾಮೆ; ಸಚಿವಾಕಾಂಕ್ಷಿಗಳಿಂದ ಬಿರುಸುಗೊಂಡ ರಾಜಕೀಯ ಚಟುವಟಿಕೆ.ಸಿದ್ದರಾಮಯ್ಯ ಆಪ್ತ ವಲಯದ ಅಧಿಕಾರಿಗಳಿಗೆ ‘ಸುರಕ್ಷಿತ’ ಹುದ್ದೆಗಳಿಗೆ ವರ್ಗಾವಣೆ.ಸಿಎಂ ಸಿದ್ದರಾಮಯ್ಯ ಪದತ್ಯಾಗ, ಡಿ.ಕೆ.ಶಿವಕುಮಾರ್ ನೂತನ ಮುಖ್ಯಮಂತ್ರಿ.ಮೈಸೂರು| ಸಿದ್ದರಾಮಯ್ಯ ರಾಜೀನಾಮೆ; ಯಾರಿಗೆ ಲಾಭ, ಯಾರ್ಯಾರಿಗೆ ನಷ್ಟ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ರಾಜ್ಯ ರಾಜಕಾರಣದಲ್ಲಿಯೇ ಉಳಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದು ಡಿ.ಕೆ.ಶಿವಕುಮಾರ್ ಅವರಿಗೆ ಎಚ್ಚರಿಕೆ ಗಂಟೆ ಎಂದು ಸಂಸದ ಡಾ.ಕೆ.ಸುಧಾಕರ್ ವಿಶ್ಲೇಷಿಸಿದರು.</p><p>ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಅನುಪಸ್ಥಿತಿ ಖಂಡಿತವಾಗಿ ಕಾಣಲಿದೆ. ಏನೇ ಭಿನ್ನಾಭಿಪ್ರಾಯಗಳು ಇದ್ದರೂ ಅವರು ಸಾಮಾಜಿಕ ನ್ಯಾಯ, ಸಮಾನತೆ, ಸಾಮಾನ್ಯ ಜನರಿಗೆ ಉತ್ತಮ ಕಾರ್ಯಕ್ರಮ ನೀಡಿದ್ದಾರೆ ಎಂದು ಹೇಳಿದರು.</p><p>ಸಿದ್ದರಾಮಯ್ಯ ಅವರು ಸುಮ್ಮನೆ ಕೂರುವವರಲ್ಲ. ಭಿನ್ನಾಭಿಪ್ರಾಯ ಹೊಂದಿರುವ ಶಾಸಕರು ಅಭಿಯಾನ ಮಾಡಿದರೆ ಅದರ ಕೇಂದ್ರವಾಗಿ ಸಿದ್ದರಾಮಯ್ಯ ಇರುತ್ತಾರೆ ಎಂದರು.</p><p>ಡಿ.ಕೆ.ಶಿವಕುಮಾರ್ ಅವರು ಹೋರಾಟ, ಸಂಘಟನೆ ಮಾಡಿದ್ದಾರೆ. ಈಗ ಮುಖ್ಯಮಂತ್ರಿ ಸ್ಥಾನ ದಕ್ಕಿಸಿಕೊಳ್ಳುತ್ತಿದ್ದಾರೆ. ರಿಯಲ್ ಎಸ್ಟೇಟ್ ಎನ್ನುವುದು ಕಳ್ಳತನ ಅಥವಾ ದರೋಡೆಯಲ್ಲ. ಅನ್ಯಾಯ ಮಾಡದೆ ಆ ವೃತ್ತಿ ಮಾಡಬೇಕು. ಡಿ.ಕೆ.ಶಿವಕುಮಾರ್ ಅವರೊಬ್ಬರೇ ಅಲ್ಲ ಅನೇಕರು ಆ ವೃತ್ತಿ ಮಾಡುತ್ತಿದ್ದಾರೆ. ಹಾಗಾಗಿ ಆ ವಿಚಾರದಲ್ಲಿ ಯಾರೂ ಟೀಕೆ ಮಾಡಬಾರದು. ಅವರು ಮುಖ್ಯಮಂತ್ರಿಯಾದ ಆರು ತಿಂಗಳ ಬಳಿಕ ಆಡಳಿತದ ವೈಖರಿ ವಿಶ್ಲೇಷಿಸಬೇಕು ಎಂದರು.</p><p>ಈಗ ಇರುವ ಸಚಿವರು ಮಾಜಿಗಳಾಗಿದ್ದಾರೆ. ಹೊಸ ತಂಡ ಕಟ್ಟಿಕೊಳ್ಳಲು ಡಿ.ಕೆ.ಶಿವಕುಮಾರ್ಗೆ ಹೈಕಮಾಂಡ್ ಎಷ್ಟು ಅವಕಾಶ ನೀಡಲಿದೆ ಎಂದು ನೋಡಬೇಕಿದೆ. ಕಾಂಗ್ರೆಸ್ನಲ್ಲಿ ಮೂರು ನಾಲ್ಕು ಗುಂಪುಗಳು ಇರುತ್ತವೆ. ಹೈಕಮಾಂಡ್, ಜಾತಿ ಎಂಬಂತೆ ಕ್ಯಾಂಪ್ಗಳಿರುತ್ತವೆ. ಇವೆಲ್ಲ ಸವಾಲುಗಳನ್ನು ಮೀರಿ ಅವರು ಆಡಳಿತ ನಡೆಸಬೇಕಿದೆ ಎಂದರು.</p>.ಸಿದ್ದರಾಮಯ್ಯ ರಾಜೀನಾಮೆ; ಸಚಿವಾಕಾಂಕ್ಷಿಗಳಿಂದ ಬಿರುಸುಗೊಂಡ ರಾಜಕೀಯ ಚಟುವಟಿಕೆ.ಸಿದ್ದರಾಮಯ್ಯ ಆಪ್ತ ವಲಯದ ಅಧಿಕಾರಿಗಳಿಗೆ ‘ಸುರಕ್ಷಿತ’ ಹುದ್ದೆಗಳಿಗೆ ವರ್ಗಾವಣೆ.ಸಿಎಂ ಸಿದ್ದರಾಮಯ್ಯ ಪದತ್ಯಾಗ, ಡಿ.ಕೆ.ಶಿವಕುಮಾರ್ ನೂತನ ಮುಖ್ಯಮಂತ್ರಿ.ಮೈಸೂರು| ಸಿದ್ದರಾಮಯ್ಯ ರಾಜೀನಾಮೆ; ಯಾರಿಗೆ ಲಾಭ, ಯಾರ್ಯಾರಿಗೆ ನಷ್ಟ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>